




ಕಡಬ ಟೈಮ್ಸ್, ಪಟ್ಟಣ ಸುದ್ದಿ: ರಸ್ತೆ ತಡೆದು ಏಕಾ ಏಕಿ ಅಡ್ಡವಾಗಿ ಕುಳಿತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಹಾಗೂ ಇತರ ತುರ್ತು ಸೇವೆಗೆ ಅಡ್ಡಿ ಪಡಿಸಿ , ಗುಂಪು ಕಟ್ಟಿಕೊಂಡು ಅಕ್ರಮ ಕೂಟ ಸೇರಿ ವಾಹನಗಳನ್ನು ತಡೆದು ನಿಲ್ಲಿಸಿ,ಗೊಂದಲದ ವಾತಾವರಣ ನಿರ್ಮಿಸಿದ ಆರೋಪದ ಮೇಲೆ ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ಕಡಬದಲ್ಲಿ ಪ್ರತಿಭಟಿಸಿದವರ ವಿರುದ್ದ ಪ್ರಕರಣ ದಾಖಲಾಗಿದೆ.
ಕಡಬ
ಠಾಣಾ ತನಿಖಾ ಎಸ್.ಐ ಅವರು ಮೇಲಾಧಿಕಾರಿಗಳ
ಆದೇಶದಂತೆ ಮೇ.2 ರಂದು ಮುಂಜಾನೆ ಇಲಾಖಾ ವಾಹನದಲ್ಲಿ ತನ್ನ ಸಿಬ್ಬಂದಿಗಳೊಂದಿಗೆ ಬಲ್ಯ, ಕುಂತೂರು ಕಡೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ
ಕಡಬ ಪೇಟೆಯ ಕಡಬ ಜಂಕ್ಷನ್ ನಲ್ಲಿ ಜನರು ಗುಂಪು ಸೇರಿ ರಸ್ತೆ ತಡೆ ಮಾಡಿ ಟಯರ್ ಗೆ ಬೆಂಕಿ ಹಚ್ಚಿ
ರಸ್ತೆ ತಡೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದಿತ್ತು.
ಈ ಸುದ್ದಿ ಓದಿರಿ: ಐದು ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿದ್ದ ಸುಳ್ಯದ ವ್ಯಕ್ತಿ ಜೈಲಿನಲ್ಲೇ ನಿಧನ
ಪೊಲೀಸರು ಬರುವುದನ್ನು ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡುತ್ತಿದ್ದ ಪ್ರತಿಭಟನಾಕಾರರು ಅಲ್ಲಿಂದ ಹೋಗಿದ್ದರು. ಪೊಲೀಸರು ಸ್ವಲ್ಪ ಜನರನ್ನು ನೋಡಿದ್ದು ಅವರ ಪರಿಚಯ ಇರುವುದಿಲ್ಲ. ಕಡಬ ಜಂಕ್ಷನ್ ನಲ್ಲಿ ಏಕಾ ಏಕಿ ರಸ್ತೆಯಲ್ಲಿ ಅಡ್ಡವಾಗಿ ಕುಳಿತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಹಾಗೂ ಇತರ ತುರ್ತು ಸೇವೆಗೆ ಅಡ್ಡಿ ಪಡಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ .
ಆದುದರಿಂದ ಅಕ್ರಮವಾಗಿ ಗುಂಪು ಕಟ್ಟಿಕೊಂಡು ಅಕ್ರಮ ಕೂಟ ಸೇರಿ ವಾಹನಗಳನ್ನು ತಡೆದು ನಿಲ್ಲಿಸಿ, ಗೊಂದಲದ ವಾತಾವರಣವನ್ನು ನಿರ್ಮಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಹಾಗೂ ರಸ್ತೆ ತಡೆ ಮಾಡಿದ ಪ್ರತಿಭಟನಾಕಾರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡವರ ವಿರುದ್ಧ ಕಡಬ ಠಾಣೆಯಲ್ಲಿ BNS 2023(U/s-126(2),189(2),285,190) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಸುದ್ದಿ ಓದಿರಿ: ಆಲಂಕಾರು: ಪೆರಾಬೆ ಗ್ರಾಮದಲ್ಲಿ ಮನೆಯೊಂದಕ್ಕೆ ಹೊಡೆದ ಸಿಡಿಲು
ಸುಹಾಸ್
ಶೆಟ್ಟಿ ಕೊಲೆ ಖಂಡಿಸಿ ಮೇ.2ರಂದು ವಿ.ಹಿಂ.ಪ. ಜಿಲ್ಲಾ ಬಂದ್
ಗೆ ಕರೆ ನೀಡಿದ್ದು ಈ ಹಿನ್ನೆಲೆಯಲ್ಲಿ ಕಡಬದಲ್ಲಿಯೂ
ರಸ್ತೆ ತಡೆ ಬಂದ್ ನಡೆದಿತ್ತು. ಪ್ರತಿಭಟನೆಯ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರು ಕಡಬ ಮುಖ್ಯ ರಸ್ತೆಯಲ್ಲಿ ಉಪ್ಪಿನಂಗಡಿ
-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ರಸ್ತೆ ಯಲ್ಲಿ ಟಯರ್ ಗಳನ್ನು ಉರಿಸಿ ಆಕ್ರೋಶ ಹೊರ ಹಾಕಿದ್ದರು.
FIR ನಲ್ಲಿ ಹೆಸರಿಲ್ಲ: ಪೊಲೀಸರು ಸ್ವಯಂ ಪ್ರೇರಿತರಾಗಿ ದಾಖಲಿಸಿಕೊಂಡ ಪ್ರಕರಣದಲ್ಲಿ ಸಂಘಟನೆಯ ಅಥವಾ ಪಕ್ಷದ ಯಾವುದೇ ಮುಖಂಡರ, ಕಾರ್ಯಕರ್ತರ ಹೆಸರನ್ನು ಉಲ್ಲೇಖಿಸಿಲ್ಲ. ಮೂಲವೊಂದರ ಮಾಹಿತಿ ಪ್ರಕಾರ ಸುಮಾರು 20 ಕ್ಕೂ ಅಧಿಕ ಮಂದಿಯ ಹೆಸರನ್ನು ಈಗಾಗಲೇ ಪೊಲೀಸರು ಸಂಗ್ರಹಿಸಿರುವುದಾಗಿ ತಿಳಿದು ಬಂದಿದೆ. ಈ ನಡುವೆ ಈ ಪ್ರಕರಣದಲ್ಲಿ ತನ್ನ ಹೆಸರು ಸೇರಿಸದಂತೆ ಪಕ್ಷವೊಂದರ ಸ್ಥಳೀಯ ಮುಖಂಡ ಪ್ರಭಾವಿಗಳ ಮೂಲಕ ಪೋಲಿಸರ ಮೇಲೆ ಒತ್ತಡ ಹೇರಿರುವುದಾಗಿ ಸುದ್ದಿ ಹಬ್ಬಿದೆ. ಈ ವಿಷಯ ಹಿಂದೂಪರ ಸಂಘಟನೆಯ ನೈಜ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.