ಐದು ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿದ್ದ ಸುಳ್ಯದ ವ್ಯಕ್ತಿ ಜೈಲಿನಲ್ಲೇ ನಿಧನ

ಐದು ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿದ್ದ ಸುಳ್ಯದ ವ್ಯಕ್ತಿ ಜೈಲಿನಲ್ಲೇ ನಿಧನ

Kadaba Times News

ಕಡಬ ಟೈಮ್ಸ್,  ಸುಳ್ಯ:  ಪ್ರಕರಣ ಒಂದರಲ್ಲಿ ಸುಮಾರು 5 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಸುಳ್ಯದ  ಕಲ್ಲುಗುಂಡಿ ಸಮೀಪದ ವ್ಯಕ್ತಿಯೊಬ್ಬರು  ಕೇರಳದ ಕಣ್ಣೂರು ಜೈಲಿನಲ್ಲಿ ಶನಿವಾರ ನಿಧನರಾಗಿದ್ದಾರೆ.

ದರ್ಕಾಸು ನಿವಾಸಿ ಅಬೂಬಕ್ಕರ್ ಸಿದ್ದೀಕ್(KADABA TIMES)


ಗೂನಡ್ಕ ದರ್ಕಾಸು ನಿವಾಸಿ ಅಬೂಬಕ್ಕರ್ ಸಿದ್ದೀಕ್ ನಿಧನರಾದವರು.   ಮೂಲತಃ ಗೂನಡ್ಕ ದರ್ಕಾಸು ನಿವಾಸಿಯಾಗಿದ್ದು ಕಳೆದ ಐದು ವರ್ಷಗಳ ಹಿಂದೆ ಕೇರಳದ ಕಾಞಂಗಾಡ್ ನಲ್ಲಿ ಪ್ರಕರಣ ಒಂದಕ್ಕೆ ಸಂಬಂಧಿಸಿ ಕಣ್ಣೂರು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು.


ಕೇರಳದ ಅನೇಕ ಕಡೆಗಳಲ್ಲಿ ಮಸೀದಿಯಲ್ಲಿ ಮುಅಲ್ಲಿಮರಾಗಿ ಕೆಲಸ ಮಾಡಿಕೊಂಡಿದ್ದ ಇವರು ಕೇರಳದಲ್ಲೂ ಇನ್ನೊಂದು ವಿವಾಹವಾಗಿದ್ದರು ಎನ್ನಲಾಗಿದೆ. . ಇದೀಗ  ನಿಧನರಾದ ವಿಷಯ ತಿಳಿದು ಅವರ ಮನೆಯವರು ಮೃತ ದೇಹವನ್ನು ಸಂದರ್ಶಿಸಿ ತರಲು ಕಣ್ಣೂರು ಜೈಲಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top