




ಕಡಬ: ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಮೆ.17 ರಂದು ಹೊಸಮಠದಲ್ಲಿರುವ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಎಲ್ಲಾ ಸಮುದಾಯದ ೯ನೇ, ೧೦ನೇ ತರಗತಿ ಮತ್ತು ಪ್ರಥಮ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಶಿಕ್ಷಣ, ಉದ್ಯೋಗವಕಾಶಗಳು, ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃಧ್ಧಿ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಮತ್ತು ಅವಕಾಶಗಳ ಬಗ್ಗೆ ಶೈಕ್ಷಣಿಕ ಮಾರ್ಗದರ್ಶನ ಮತ್ತು ಮಾಹಿತಿ ಕಾರ್ಯಾಗಾರ ನಡೆಯಿತು.
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ನಿವೃತ್ತ ಮುಖ್ಯಗುರುಗಳಾದ ದೇವಣ್ಣ ಗೌಡ ನೆಲ್ಲ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ರಾಷ್ರ್ಟೀಯ ಮಟ್ಟದ ತರಬೇತುದಾರರಿಂದ ಶೈಕ್ಷಣಿಕ ಮಾಹಿತಿ ಕಾರ್ಯಾಗಾರವು ಮೂರು ಹಂತದ ಅಧಿವೇಶನದಲ್ಲಿ ನಡೆಯಿತು.
ಮೊದಲನೇ ಅಧಿವೇಶನದಲ್ಲಿ ನಾಗಾರ್ಜುನ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಮಹೆಶ್ ಕೆ.ಕೆ ಅವರು ಎಸ್.ಎಸ್. ಎಲ್. ಸಿ. ಮತ್ತು & ಪಿ.ಯು.ಸಿ ಶಿಕ್ಷಣದ ನಂತರ ಮುಂದೇನು ಮತ್ತು ಉದ್ಯೋಗವಕಾಶಗಳ ಕುರಿತಾಗಿ, ಹಾಗೂ ಎರಡನೇ ಅಧಿವೇಶನದಲ್ಲಿ ಡಾ .ಶಿವಕುಮಾರ್ ಅವರು ಉದ್ಯಮಶೀಲತೆ ಹಾಗೂ ಕೌಶಲ್ಯಾಭಿವೃಧ್ಧಿ ವಿಷಯದ ಬಗ್ಗೆ ಗೋಪಾಲಕೃಷ್ಣ ಪುಯಿಲ ಅವರು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಮತ್ತು ಅವಕಾಶಗಳ ಕುರಿತಾಗಿ ಮಾಹಿತಿ ನೀಡಿದರು. ಸ್ಪಂದನಾ ಸಮುದಾಯ ಸಹಕಾರ ಸಂಘದ ಅಧ್ಯಕ್ಷ ಕೇಶವ ಅಮೈ ಇವರು ವಿದ್ಯಾರ್ಥಿಗಳಿಗೆ ಕೌಶ ಲ್ಯಾಭಿವೃಧ್ಧಿಯ ಮೂಲಕ ಸ್ವ-ಉದ್ಯಮಿಗಳಾಗುವ ಕುರಿತಾಗಿ ಮಾತನಾಡಿದರು.
ಮಾಹಿತಿ
ಕಾರ್ಯಗಾರದಲ್ಲಿ ಸುಮಾರು 150 ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘದ ಸಂಘಟನಾ ಕಾರ್ಯದರ್ಶಿ ಶಿವರಾಮ್ ಗೌಡ ಏನೆಕಲ್ಲು , ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಂಜೋಡಿ, ನಿರ್ದೇಶಕರಾದ ಸರ್ವೋತ್ತಮ ಗೌಡ ಪಂಜೋಡಿ, ವೆಂಕಟರಮಣ ಗೌಡ ಪಾಂಗ, ಚಂದ್ರಶೇಖರ ಗೌಡ ಕೋಡಿಬೈಲು, ಶ್ರೀಮತಿ ಆಶಾ ತಿಮ್ಮಪ್ಪ ಗೌಡ, ಗಿರೀಶ್ ಎ.ಪಿ., ಕುಶಾಲಪ್ಪ
ಗೌಡ ಅನಿಲ, ಶ್ರೀಮತಿ ನೀಲಾವತಿ ಶಿವರಾಂ, ದಯಾನಂದ ಆಲಡ್ಕ, ರಾಧಾಕೃಷ್ಣ ಗೌಡ ಕೆರ್ನಡ್ಕ, ಗಣೇಶ್ ಕೈಕುರೆ ಹಿರಿಯರಾದ ತಿಮ್ಮಪ್ಪ ಗೌಡ ಕುಂಡಡ್ಕ , ಶ್ರೀಧರ ಗೌಡ ಗೋಳ್ತಿಮಾರು, ತಾಲೂಕು ಯುವ ಘಟಕದ ಅಧ್ಯಕ್ಷರಾದ ಪೂರ್ಣೇಶ್ ಬಲ್ಯ, ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ವೀಣಾ ಕೊಲ್ಲೆಸಾಗು, ಕಾರ್ಯದರ್ಶಿಗಳಾದ ಲಾವಣ್ಯ ಮಂಡೆಕರ ಉಪಸ್ಥಿತರಿದ್ದರು.
ಒಕ್ಕಲಿಗ ಗೌಡ ಸೇವಾ ಸಂಘದ ಸಮನ್ವಯ ಅಧಿಕಾರಿಗಳಾದ ವಾಸುದೇವ ಗೌಡ ಕೋಲ್ಪೆ ಸ್ವಾಗತಿಸಿ, ನಿದೇರ್ಶಕರಾದ ಪ್ರವೀಣ್ ಕುಂಟ್ಯಾನ ವಂದಿಸಿದರು. ಸಂಘದ ವ್ಯವಸ್ಥಾಪಕರಾದ ಅಶೋಕ್ ಶೇಡಿ ಕಾರ್ಯಕ್ರಮವನ್ನು ನಿರೂಪಿಸಿದರು.