ಹೃದಯಾಘಾತಕ್ಕೆ ಒಳಗಾಗಿ ಚಿಕಿತ್ಸೆಗಾಗಿ ದಾಖಲಾಗಿದ್ದ ಕಡಬದ ವ್ಯಕ್ತಿಗೆ ಆಸ್ಪತ್ರೆಯಲ್ಲೇ ಆಧಾರ್ ತಿದ್ದುಪಡಿ ಮಾಡಿಕೊಟ್ಟ ಅಂಚೆ ಇಲಾಖೆಯ ಸಿಬ್ಬಂದಿ

ಹೃದಯಾಘಾತಕ್ಕೆ ಒಳಗಾಗಿ ಚಿಕಿತ್ಸೆಗಾಗಿ ದಾಖಲಾಗಿದ್ದ ಕಡಬದ ವ್ಯಕ್ತಿಗೆ ಆಸ್ಪತ್ರೆಯಲ್ಲೇ ಆಧಾರ್ ತಿದ್ದುಪಡಿ ಮಾಡಿಕೊಟ್ಟ ಅಂಚೆ ಇಲಾಖೆಯ ಸಿಬ್ಬಂದಿ

Kadaba Times News

ಕಡಬ ಟೈಮ್ಸ್ , ಪ್ರಮುಖ ಸುದ್ದಿ: ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರಿಗೆ ಅಂಚೆ ಇಲಾಖೆಯ ಸಿಬ್ಬಂದಿಗಳು ಆಸ್ಪತ್ರೆಗೆ ಆಗಮಿಸಿ ಆಧಾರ್  ತಿದ್ದುಪಡಿಮಾಡಿಸಿಕೊಟ್ಟ ಘಟನೆ ವರದಿಯಾಗಿದೆ.



ಕಡಬ ತಾಲೂಕು ಕಳಾರ ನಿವಾಸಿ ಪಿಜಿನ ಎಂಬವರು ಹೃದಯಾಘಾತಕ್ಕೆ ಒಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.  ಆಯುಷ್ಮಾನ್ ಯೋಜನೆ ಮೂಲಕ ಚಿಕಿತ್ಸೆ ಪಡೆಯಲು  ಆಧಾರ್ ಕಾರ್ಡ್ ನಂಬರಿದ್ದರೂ ಅದರಲ್ಲಿ ಪೋನ್ ನಂಬರ್ ಸಮರ್ಪಕವಾಗಿಲ್ಲದ ಕಾರಣ ಒಟಿಪಿ ಪಡೆಯಲು ತಾಂತ್ರಿಕ ಸಮಸ್ಯೆ ಎದುರಾಗಿತ್ತು.


ಈ ವಿಚಾರವನ್ನು ಆಸ್ಪತ್ರೆಗೆ ದಾಖಲಾಗಿದ್ದ ಪಿಜಿನ ಅವರ ಮಗ   ರಾಘವ ಎಂಬವರು   ಮೊಗೇರ ರಾಜ್ಯ ಸಂಘಟನೆಯ   ಅಧ್ಯಕ್ಷ   ನಂದರಾಜ್  ಸಂಕೇಶ ಅವರ ಗಮನಕ್ಕೆ ತಂದಿದ್ದರು. ಅವರು ಕೂಡಲೇ ಮಂಗಳೂರು ವಿಭಾಗದ  ಅಂಚೆ  ಇಲಾಖೆಯ ಅಧಿಕಾರಿ   ಶಂಕರ್  ಕೆ. ಅವರ ಗಮನಕ್ಕೆ ತಂದು ತುರ್ತು ಅಗತ್ಯದ ಬಗ್ಗೆ ವಿನಂತಿಸಿಕೊಂಡಿದ್ದರು.


ಆಧಾರ್  ತಿದ್ದುಪಡಿ ಮಾಡುವ ಸಲುವಾಗಿ ಕೂಡಲೇ   ಅಂಚೆ  ಕಚೇರಿ  ನೌಕರ  ವಿನೋದ್  ಎಂಬವರನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಿ  ಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿಯ ಬೆರಳಚ್ಚು ಪಡೆದು ಆಧಾರ್ ತಿದ್ದುಪಡಿಗೆ ಮುಂದಾಗಿದ್ದಾರೆ. ಅಮ್ಚೆ ಇಲಾಖೆಯ ಈ ಕ್ರಮಕ್ಕೆ  ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top