ಹಲ್ಲೆ ಪ್ರಕರಣ: ವಾರಂಟ್ ಆರೋಪಿಯಯನ್ನು ಬಂಧಿಸಿದ ಕಡಬ ಪೊಲೀಸರು

ಹಲ್ಲೆ ಪ್ರಕರಣ: ವಾರಂಟ್ ಆರೋಪಿಯಯನ್ನು ಬಂಧಿಸಿದ ಕಡಬ ಪೊಲೀಸರು

Kadaba Times News

ಕಡಬ: ಹಲ್ಲೆ ಪ್ರಕರಣವೊಂದರಲ್ಲಿ ಜಾಮೀನು ಪಡೆದು ಬಳಿಕ ನ್ಯಾಯಾಲಯಕ್ಕೆ ವಿಚಾರಗೆ ಹಾಜರಾಗದೆ ಆರೋಪಿಯನ್ನು ಪತ್ತೆ ಹಚ್ಚಿ ಮತ್ತೆ ಬಂಧಿಸಿದ್ದು ಮಾನ್ಯ  ನ್ಯಾಯಾಲಯವು  14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.


ಕಡಬ ತಾಲೂಕು ರಾಮಕುಂಜ ಗ್ರಾಮದ ಆತೂರು ನಿವಾಸಿ ಯೂಸೂಪ್(32ವ) ಬಂಧಿತ ವ್ಯಕ್ತಿ;



2019 ರ ಜೂನ್  ಆತೂರು ಜಂಕ್ಷನ್‌  ಬಳಿ  ವ್ಯಕ್ತಿಯೊಬ್ಬರಿಗೆ  ಹಲ್ಲೆ ಘಟನೆ ನಡೆದಿತ್ತು. ಆರೋಪಿ ಸಹಿತ ಇತರ ಮೂವರು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ  (ಠಾಣಾ ಅ ಕ್ರ: 91/2019 ಕಲಂ: 341,323,324,504,506 R/w 34 IPC ) ಪ್ರಕರಣ ದಾಖಲಾಗಿತ್ತು.    ಸುಮಾರು 3 ವರ್ಷಗಳಿಂದ 20 ಕ್ಕಿಂತ ಹೆಚ್ಚು ಬಾರಿ ಪುತ್ತೂರು ನ್ಯಾಯಾಲಯವು ದಸ್ತಗಿರಿ ವಾರೆಂಟ್ ಹೊರಡಿಸಿತ್ತು. ಹೀಗಾಗಿ  ನ್ಯಾಯಾಲಯಕ್ಕೆ ವಿಚಾರಣೆ ಬಗ್ಗೆ ಹಾಜರಾಗದೇ ನಿಯಮಾವಳಿ ಉಲ್ಲಂಘಿಸಿದ  ಈತನ ವಿರುದ್ಧ ಕಡಬ ಠಾಣೆಯಲ್ಲಿ  ಕಲಂ:269 BNS-2023 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.


 ವಾರಂಟ್ ಆರೋಪಿ ಪತ್ತೆ ಬಗ್ಗೆ ಉಪ್ಪಿನಂಗಡಿ ಸಿಪಿಐ   ರವರ ಮಾರ್ಗದರ್ಶನದಲ್ಲಿ ಕಡಬ ಠಾಣಾ ಪಿ ಎಸ್ ಐ ರವರ ನಿರ್ದೇಶನದಂತೆ ಕಡಬ ಠಾಣಾ ವಾರೆಂಟ್ ತಂಡ ಆರೋಪಿಯನ್ನು ದಸ್ತಗಿರಿ ಮಾಡಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top