




ಕಡಬ ಟೈಮ್ಸ್(KADABA TIMES): ಸುಳ್ಯದ ಸರ್ಕಾರಿ ಬಸ್ನಿಲ್ದಾಣದ ಪಕ್ಕದ ಕಟ್ಟಡವೊಂದರಲ್ಲಿ ನಂಬರ್ ಗೇಮ್ ಆಟ ನಡೆಯುತ್ತಿದ್ದ ಅಡ್ಡೆಗೆ ಸುಳ್ಯ ಕ್ರೈಂ ಎಸ್.ಐ.ಸರಸ್ವತಿ ಅವರ ನೇತೃತ್ವದಲ್ಲಿ ಜೂ.4ರಂದು ದಾಳಿ ನಡೆದಿದೆ.
ಕೆಲವು ದಿನಗಳಿಂದ ನಿರಂತರವಾಗಿ ನಂಬರ್ ಗೇಮ್ ಆಟ ನಡೆಯುತ್ತಿತ್ತು. ಕೂಲಿ ಕಾರ್ಮಿಕರು ಸಹಿತ ಹಲವರು ಬೆಳಗ್ಗೆ ಯಿಂದಲೇ ಬಂದು ಈ ಆಟದಲ್ಲಿ ಸೇರಿಕೊಳ್ಳುತ್ತಿದ್ದರು .ಅಲ್ಲದೆ ಹಣವನ್ನೂ ಕಳೆದುಕೊಳ್ಳುತ್ತಿದ್ದರು. ಈ ಕುರಿತು ಸುಳ್ಯ ಪೋಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆದಿದ್ದು ಆಟ ಆಡಿಸುತ್ತಿದ್ದ ಇಬ್ಬರ ಮೇಲೆ ಪ್ರಕರಣ ದಾಖಲಿಸಿದರಲ್ಲದೆ ಈ ಪೈಕಿ ಒಬ್ಬನನ್ನು ಬಂಧಿಸಿದ್ದಾರೆ.
ಆಟ ನಡೆಸುತ್ತಿದ್ದರೆನ್ನಲಾದ ನಿತಿನ್ ಮತ್ತು ಶರತ್ ಆಳ್ವ ಎಂಬವರ ಮೇಲೆ ಪೋಲೀಸರು ಕೇಸು ದಾಖಲಿಸಿರುವುದಾಗಿದೆ. ಸ್ಥಳದಲ್ಲಿದ್ದ ನಿತಿನ್ ಎಂಬಾತನನ್ನು ವಶ ಪಡೆದು ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.
ಒಂದಂಕಿ
ಗೇಮ್, ನಂಬರ್ ಗೇಮ್ ಇತ್ಯಾದಿ ಹೆಸರಿನಲ್ಲಿ ಈ ಆಟ ನಡೆಯುತ್ತಿದ್ದು
ಹಲವು ಹಣ ಕಳೆದುಕೊಳ್ಳುತ್ತಿದ್ದರು. ನಗರದ ಕೆಲವು
ಕಡೆ ಈ ಆಟ ವಿಸ್ತರಿಸಿತ್ತು. ಸುಳ್ಯ ತಾಲೂಕು
ಪಂಚಾಯತ್ ಸಭೆಗಳಲ್ಲಿ, ನಗರ ಪಂಚಾಯತ್ ಸಭೆಗಳಲ್ಲಿ ಈ ಕುರಿತು ಜನಪ್ರತಿನಿಧಿಗಳು
ಧ್ವನಿ ಎತ್ತಿ ಕ್ರಮಕ್ಕೆ ಒತ್ತಾಯಿಸಿದ್ದರು.