ನೂಜಿಬಾಳ್ತಿಲದ ಬೆಥನಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ: ಶಾಲಾ ಆವರಣದಲ್ಲಿ ಗಿಡ ನೆಟ್ಟು ಪರಿಸರ ಕಾಳಜಿ ತೋರಿದ ವಿದ್ಯಾರ್ಥಿಗಳು

ನೂಜಿಬಾಳ್ತಿಲದ ಬೆಥನಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ: ಶಾಲಾ ಆವರಣದಲ್ಲಿ ಗಿಡ ನೆಟ್ಟು ಪರಿಸರ ಕಾಳಜಿ ತೋರಿದ ವಿದ್ಯಾರ್ಥಿಗಳು

Kadaba Times News

 ಕಡಬ ಟೈಮ್ಸ್ (KADABA TIMES):  ಪರಿಸರ ಉಳಿಸುವುದು ಕೇವಲ ಒಂದು ದೈನಂದಿನ ಕರ್ತವ್ಯವಲ್ಲ, ಇದು ನಮ್ಮ ಮುಂದಿನ ತಲೆಮಾರಿಗೆ ನಾವು ಕೊಡುವ ಅಮೂಲ್ಯ ಕೊಡುಗೆ,” “ಪರಿಸರ ಉಳಿಸಿ, ನಾಡು ಉಳಿಸಿಎಂಬ ಸಂಕಲ್ಪಕ್ಕೆ ಎಲ್ಲರೂ ಪಾಲುಗಾರರಾಗಬೇಕೆಂದು ನಿವೃತ್ತ ಮುಖ್ಯ ಗುರುಗಳಾದ ಶಿವರಾಮ ಕರೆ ನೀಡಿದರು.



ಅವರು ನೂಜಿಬಾಳ್ತಿಲದ  ಬೆಥನಿ ಪ್ರೌಢಶಾಲೆಯಲ್ಲಿ  ಜೂ.5ರಂದು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ   ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಸಂಸ್ಥೆಯ ನಿರ್ದೇಶಕ ಫಾ.ವಿಜೋಯ್ ವರ್ಗೀಸ್ OIC  ಅಧ್ಯಕ್ಷತೆವಹಿಸಿ ಮಾತನಾಡಿ ವಿದ್ಯಾರ್ಥಿಗಳು ಪರಿಸರದ ಬಗ್ಗೆ ಜಾಗೃತಿ ಹೊಂದಿ, ನಿತ್ಯ ಜೀವನದಲ್ಲಿ ಹಸಿರು ಚಟುವಟಿಕೆಗಳಿಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.


ಬಳಿಕ ವಿದ್ಯಾರ್ಥಿಗಳು ತಂದ ಗುಣಮೂಲ್ಯಯುತ ಗಿಡಗಳನ್ನು ಶಾಲಾ ಆವರಣದಲ್ಲಿ ನೆಟ್ಟು, ನೀರುಣಿಸಿ ಮಾದರಿ ಪರಿಸರ ಪ್ರೀತಿಯನ್ನು ತೋರಿಸಿದರು. ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆಯನ್ನು ಉತ್ತೇಜಿಸಲು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಚಿತ್ರಕಲಾ ಸ್ಪರ್ಧೆ,  ಪ್ರಬಂಧ ಸ್ಪರ್ಧೆ, ಔಷಧ ಗಿಡಗಳ ಪಟ್ಟಿ ಮಾಡುವುದು ಹಾಗೂ ಅದನ್ನು ತಂದು ಅದರ ಬಗ್ಗೆ ವಿವರಿಸುವ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಈ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಕೂಡ ನಡೆಯಿತು.  


ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಜಾರ್ಜ್ ಟಿ ಎಸ್, ಮುಖ್ಯ ಗುರುಗಳಾದ ತೋಮಸ್ ಏ ಕೆ, ಸಹಶಿಕ್ಷಕರಾದ ಬಿಜು ಕೆ ಜೆ, ಸುಮಿತಾ ಬಿ ಟಿ, ಶಿಲ್ಪ ಎ. ಜಿನಿ, ದೈ.ಶಿ. ಶಿಕ್ಷಕರಾದ ಮತಾಯಿ ಓ ಜೆ, ಉಪನ್ಯಾಸಕರಾದ ಶಾಂಭವಿ, ಜಿನ್ಸಿ ಜೋಸೆಫ್, ಬೀನಾ ಜಾರ್ಜ್, ಆನಿ ಸಲೀನ್, ದಿಲ್ ಶಾದ್, ಶ್ವೇತಾ, ದೈ.ಶಿ. ಉಪನ್ಯಾಸಕರಾದ ಪುನೀತ್, ಹಾಗೂ ಶಿಕ್ಷಕೇತರ ಸಿಬ್ಬಂದಿಗಳಾದ ಯೋಹನ್ನಾನ್, ಅನ್ನಮ ಎಂ, ಸಂತೋಷ್ ಮೊದಲಾದವರು ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಜಾರ್ಜ್ ಟಿ ಎಸ್ ಅವರು ಸ್ವಾಗತಿಸಿ,  ವಿದ್ಯಾರ್ಥಿನಿ ಆಯಿಷತ್ ಶಿಬಿಲ ಧನ್ಯವಾದ ಅರ್ಪಿಸಿದರು. ವಿದ್ಯಾರ್ಥಿನಿ ನಿಶಾ  ನಿರೂಪಿಸಿದರು.

Tags

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top