




ಕಡಬ ಟೈಮ್ಸ್, ಪ್ರಮುಖ ಸುದ್ದಿ: ಇಲ್ಲಿನ ಕೋಡಿಂಬಾಳ ಗ್ರಾಮದ ರಾಮನಗರದಲ್ಲಿರುವ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಹಾಗೂ ಕೊರಗಜ್ಜ ದೈವಸ್ಥಾನದ ಕಾಣಿಕೆ ಹುಂಡಿಗಳನ್ನು ಮುರಿದು ಕಳ್ಳತನ ಮಾಡಿರುವ ಘಟನೆ ಜ.28 ನಸುಕಿನ ವೇಳೆ 4:50ರ ವೇಳೆ ನಡೆದಿದೆ.
![]() |
ಪಿಕ್ಕಾಸಿನೊಂದಿಗೆ ಬಂದು ಹರಕೆ ಡಬ್ಬಿ ಹೊಡೆದ ಕಳ್ಳ(KADABA TIMES) |
ಕಬ್ಬಿಣದ ಪಿಕಾಸ್ಸನ್ನು ಕೈಯಲ್ಲಿ ಹಿಡಿದುಕೊಂಡು ಹೋಗಿ ಬೀಗ ಮುರಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ನವಂಬರ್ 16 ರಂದು
ದೈವಸ್ಥಾನದ ಮೂರು ಕಾಣಿಕೆ ಡಬ್ಬಿಗಳನ್ನು ಹೊಡೆದು ಕಳ್ಳತನ ಮಾಡಲಾಗಿತ್ತು. ಸ್ಥಳದಲ್ಲಿ ಕಾಣಿಗೆ ಹುಂಡಿ ಒಡೆಯಲು ಬಳಸಿರುವ ಕಬ್ಬಿಣದ ಸಾಧನವೊಂದು ಪತ್ತೆಯಾಗಿತ್ತು.
ಕಳ್ಳತನ ಪ್ರಕರಣ ನಡೆದ ಬಳಿಕ ಪೊಲೀಸರ ಸೂಚನೆ ಮೇರೆಗೆ ದೈವಸ್ಥಾನದ
ಆಡಳಿತ ಮಂಡಳಿ ಸಿಸಿ ಟಿವಿ ಅಳವಡಿಸಿತ್ತು. ಇದೀಗ ಮತ್ತೊಮ್ಮೆ ಕಳ್ಳತನ ನಡೆದಿದ್ದು ಗ್ರಾಮಸ್ಥರಲ್ಲಿ ಅಚ್ಚರಿ
ಮೂಡಿಸಿದೆ. ಕಳ್ಳತನ ನಡೆದಿರುವ ಮಾಹಿತಿ ತಿಳಿದು ಪೊಲೀಸರು
ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ದೈವಸ್ಥಾನದ ದೂರು ನೀಡಿರುವುದಾಗಿ ತಿಳಿದು
ಬಂದಿದ್ದು ಆದರೆ ಪ್ರಕರಣ ದಾಖಲಾಗಿಲ್ಲ ಎಂಬ ಮಾಹಿತಿ ಲಭಿಸಿದೆ. ಸ್ಥಳೀಯ ಕಳ್ಳರೇ ಆಗಿರಬಹುದೆಂದು ಸಂಶಯಿಸಲಾಗಿದೆ.
ಕಳ್ಳತನ ಘಟನೆ ನಡೆದಾಗ ಪ್ರಕರಣ ದಾಖಲಾಗಬೇಕು: ಈ ದೈವಸ್ಥಾನದಲ್ಲಿ ಇದು ಎರಡನೆ ಬಾರಿ ಕಳ್ಳತನ ವಾಗಿದೆ. ಈ ಹಿಂದೆ ಆಡಳಿತ ಮಂಡಳಿ ಕಳ್ಳತನವಾದಾಗ ದೂರು ನೀಡಿದ್ದು ಎನ್.ಸಿ. ಆರ್ ದಾಖಲಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ದೂರು ನೀಡಲು ಮುಂದಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳನನ್ನು ಪತ್ತೆ ಹಚ್ಚಬೇಕೆಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.