




ಕಡಬ ಟೈಮ್, ಪಟ್ಟಣ ಸುದ್ದಿ: ಕಡಬದ ಟೋಮ್ ಬಜಾರ್ನಲ್ಲಿ ಕಛೇರಿ ಹೊಂದಿರುವ ನ್ಯಾಯವಾದಿ ಪ್ರಶಾಂತ್ ಪಂಜೋಡಿಯವರ ನೂತನ ಉಪಕಛೇರಿಯನ್ನು ಶಾಲೂಮ್ ಟವರ್ಸ್ ಮಹಡಿಯಲ್ಲಿ ಸೋಮವಾರ ಉದ್ಘಾಟಿಸಲಾಯಿತು.
ನೂತನ ಕಛೇರಿಯನ್ನು ಪ್ರಶಾಂತ್ ಪಂಜೋಡಿಯವರ
ತಂದೆ ಗಂಗಾಧರ ಗೌಡ ಪಂಜೋಡಿಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ
ಪ್ರಶಾಂತ್ ಪಂಜೋಡಿಯವರ ತಾಯಿ ಉಮಾವತಿ ಉಪಸ್ಥಿತರಿದ್ದರು.
ಟೋಮ್ ಬಜಾರ್ ಮಾಲಕ ತೋಮನ್ಸ್ ಕೆ. ಟಿ., ಶಾಲೂಮ್ ಟರ್ಸ್
ಮಾಲಕ ಅಲೆಕ್ಸ್ , ನ್ಯಾಯವಾದಿಗಳಾದ ರಮೇಶ್ ಎನ್.ಸಿ. ರಾಮಕುಂಜ, ಶಿವಪ್ರಸಾದ್
ಪುತ್ತಿಲ, ರಾಮಚಂದ್ರ ದೇರಾಜೆ , ಲೋಕೇಶ್ ಎಮ್. ಜೆ., ಅಗಮಿಸಿ ಶುಭ ಹಾರೈಸಿದರು.
ಪ್ರಮುಖರಾದ ಮೋಹನ್ , ಮನೋಜ್ ಪಂಜೋಡಿ , ಯೋಗೀಶ್
ಪಂಜೋಡಿ , ಮೇದಪ್ಪ ಡೆಪ್ಪುಣಿ , ತೋಮಸ್ ಇಡೆಯಾಲ್ , ದಿವಾಕರ ಮುಂಡಾಳ , ರೋಹಿತ್ ಪಂಜೋಡಿ , ಗಣೇಶ
ಪಂಜೋಡಿ , ಸರ್ವೋತ್ತಮ ಪಂಜೋಡಿ , ದಿನೇಶ್ ಪಂಜೋಡಿ , ಶ್ರೀತನ್ ಪಂಜೋಡಿ , ಕೇಶವ ಪಂಜೋಡಿ ಭಾಗವಹಿಸಿದರು.
ಸೇವಂತಿ ಪ್ರಶಾಂತ್ ಸ್ವಾಗತಿಸಿದರು. ಮಾನಸ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು .