


ಕುಕ್ಕೆ ಸುಬ್ರಹ್ಮಣ್ಯ: ಮಕ್ಕಳ ಜೊತೆ ಕೇರಂ ಆಟ ಆಡಿ ಮಲಗಿದ ತಾಯಿಯೊಬ್ಬಳು ಮರುದಿನ ಏಳದೆ ಮಲಗಿದಲ್ಲೇ ಮೃತಪಟ್ಟ ಘಟನೆ ಸುಬ್ರಹ್ಮಣ್ಯ ಠಾಣ ವ್ಯಾಪ್ತಿಯ ನಾಲ್ಕೂರು ಗ್ರಾಮದಿಂದ ವರದಿಯಾಗಿದೆ.
ಸುಳ್ಯ ತಾಲೂಕು ನಾಲ್ಕೂರು ಗ್ರಾಮದ ಮೆಟ್ಟಿನಡ್ಕದ
ಸುಮಿತ್ರ ಎಂಬವರು ಮೃತಪಟ್ಟ ಮಹಿಳೆ.
ಡಿ.9ರಂದು ರಾತ್ರಿ ಪತಿ
ಮತ್ತು ಮಕ್ಕಳೊಂದಿಗೆ ಕೇರಂ
ಆಟ ಆಡಿ ಮಲಗಿದ್ದು, ರಾತ್ರಿ ಪತ್ನಿ ಊಟ ಮಾಡಿರುವುದಿಲ್ಲ. ಪತಿ
ಬೆಳಿಗ್ಗೆ
ಕೂಲಿ ಕೆಲಸಕ್ಕೆ ಹೋಗಿದ್ದು, ಕೆಲಸ ಮುಗಿಸಿ ಬಂದಾಗ ಪತ್ನಿ ಮೃತ ಪಟ್ಟಿರುವುದು ತಿಳಿದಿದು ಬಂದಿದೆ.
ಮಕ್ಕಳಲ್ಲಿ ವಿಚಾರಿಸಿದಾಗ ಪತ್ನಿ ಮೇಲೆ ಏಳದೆ ಮಲಗಿದ್ದಲ್ಲೆ ಮಗ ಗಂಜಿ ತಿಳಿಯನ್ನು ಕುಡಿಸಿದ್ದು, ಎರಡನೇ ಮಗಳು ಶಾಲೆಯಿಂದ ಬಂದು ನೋಡಿದಾಗ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾಳೆ. ಪತ್ನಿಯು ರಾತ್ರಿ ಮತ್ತು ಬೆಳಿಗ್ಗೆ ಊಟ ಮಾಡದೇ ಇದ್ದು ಅಸ್ವಸ್ಥಗೊಂಡು ಮೃತ ಪಟ್ಟಿರುವುದಾಗಿ ಮೃತ ಮಹಿಳೆಯ ಪತಿ ಆನಂದ ಎಂಬವರು ನೀಡಿದ ದೂರಿನಂತೆ ಸುಬ್ರಹ್ಮಣ್ಯ ಠಾಣೆ ಯು.ಡಿ. ಆರ್ ನಂಬ್ರ: 25/2024 ಕಲಂ: 194 BNSS ಯಂತೆ ಪ್ರಕರಣ ದಾಖಲಾಗಿದೆ.