ಕಡಬ: ಸೇತುವೆ ಅಧಿಕೃತ ಉದ್ಘಾಟನೆಗೆ ಮುನ್ನವೇ ಲಕ್ಷ ರೂ ಮೌಲ್ಯದ ಸೋಲಾರ್ ದೀಪಗಳನ್ನು ಕದ್ದೊಯ್ದ ಕಳ್ಳರು

Kadaba Times News

 

ಪಾಲೋಳಿ ಸೇತುವೆಯಲ್ಲಿ ಅಳವಡಿಸಿರುವ ದಾರಿ ದೀಪ ಕಾಣೆಯಾಗಿರುವುದು(KADABA TIMES)

ಕಡಬ : ಎಡಮಂಗಲ-ಕಡಬವನ್ನು ಸಂಪರ್ಕಿಸುವ  ಪ್ರಮುಖ ಸೇತುವೆಯಾಗಿರುವ ಪಿಜಕ್ಕಳದ ಪಾಲೋಳಿ ಸೇತುವೆಯಲ್ಲಿ ಅಳವಡಿಸಿರುವ ಲಕ್ಷ ರೂ ಬೆಲೆಬಾಳುವ ದಾರಿದೀಪಗಳನ್ನು ಕಳ್ಳರು ಕದ್ದೊಯ್ದ ಘಟನೆ ಡಿ.10  ರಾತ್ರಿ ನಡೆದಿದೆ.


ಇತ್ತೀಚೆಗೆ ಸುಳ್ಯ ಶಾಸಕಿ ಮುಂದಾಳತ್ವದಲ್ಲಿ ಸೇತುವೆಯನ್ನು ತಾತ್ಕಾಲಿಕವಾಗಿ ಉದ್ಘಾಟಿಸಿದ ಬಳಿಕ ರಸ್ತೆಯಲ್ಲಿ ವಾಹನಗಳ ಸಂಚಾರ ಅಧಿಕವಾಗಿದೆ. ಸೇತುವೆ ನಿರ್ಮಾಣದ  ನಂತರ ಲೋಕೋಪಯೋಗಿ ಇಲಾಖೆಯು  ಸೋಲಾರ್  ಬೀದಿ ದೀಪಗಳನ್ನು ಕೂಡ ಅಳವಡಿಸಲಾಗಿತ್ತು.  ಇದೀಗ ಎರಡು ಸೋಲಾರ್ ದೀಪಗಳನ್ನು ಕಳ್ಳರು ಎಗರಿಸಿದ್ದಾರೆ.


ನೂತನ ಸೇತುವೆ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಸಹಿತ ಕಳ್ಳಸಾಗಣೆಯಂತಹ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.  ಉಳಿದ ದಾರಿ ದೀಪಗಳು ಕಳ್ಳರ ಪಾಲಾಗಲಿದ್ದು  ಸ್ಥಳೀಯಾಡಳಿತ ಮತ್ತು  ಪೊಲೀಸರು ಕ್ರಮ ಕೈಗೊಳ್ಳುವಂತೆ ಆ ಭಾಗದ ನಾಗರಿಕರು ಒತ್ತಾಯಿಸಿದ್ದಾರೆ.


ಸುಳ್ಯ-ಕಡಬ ಉಭಯ ತಾಲೂಕಿನ ಸಂಪರ್ಕ ಕೊಂಡಿಯಾಗಿರುವ    ಪ್ರದೇಶಕ್ಕೆ ಪೊಲೀಸರು ಗಸ್ತು ತಿರುಗಬೇಕು ಜೊತೆಗೆ  ಸೇತುವೆ ಬಳಿ  ಸಿಸಿಟಿವಿ ಅಳವಡಿಸಬೇಕಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.


ಈ ಬಗ್ಗೆ ಕಡಬ ಟೈಮ್ಸ್ ಗೆ ಪ್ರತಿಕ್ರಿಯೆ ನೀಡಿದ  ಜಿಲ್ಲಾ ಪರಿಷದ್ ಮಾಜಿ ಸದಸ್ಯ,  ಪಾಲೋಲಿ ಸೇತುವೆ ನಿರ್ಮಾಣದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ  ಸಯ್ಯದ್ ಮೀರಾ ಸಾಹೇಬ್ ಅವರು  ಲೋಕೋಪಯೋಗಿ ಇಲಾಖೆಯ ಸಚಿವರು ಈ ಸೇತುವೆಯನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಅದಕ್ಕೂ ಮುನ್ನವೇ ದಾರಿ ದೀಪಗಳನ್ನು ಕಳ್ಳರು ಕದ್ದೊಯ್ದಿರುವುದು ಆತಂಕಕಾರಿಯಾಗಿದೆ. ಕೂಡಲೇ ಪೊಲೀಸರು ಕರ್ಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. 


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top