



![]() |
ಪಾಲೋಳಿ ಸೇತುವೆಯಲ್ಲಿ ಅಳವಡಿಸಿರುವ ದಾರಿ ದೀಪ ಕಾಣೆಯಾಗಿರುವುದು(KADABA TIMES) |
ಕಡಬ : ಎಡಮಂಗಲ-ಕಡಬವನ್ನು ಸಂಪರ್ಕಿಸುವ ಪ್ರಮುಖ
ಸೇತುವೆಯಾಗಿರುವ ಪಿಜಕ್ಕಳದ ಪಾಲೋಳಿ ಸೇತುವೆಯಲ್ಲಿ ಅಳವಡಿಸಿರುವ ಲಕ್ಷ ರೂ ಬೆಲೆಬಾಳುವ ದಾರಿದೀಪಗಳನ್ನು
ಕಳ್ಳರು ಕದ್ದೊಯ್ದ ಘಟನೆ ಡಿ.10 ರಾತ್ರಿ
ನಡೆದಿದೆ.
ಇತ್ತೀಚೆಗೆ ಸುಳ್ಯ ಶಾಸಕಿ ಮುಂದಾಳತ್ವದಲ್ಲಿ ಸೇತುವೆಯನ್ನು ತಾತ್ಕಾಲಿಕವಾಗಿ ಉದ್ಘಾಟಿಸಿದ ಬಳಿಕ ಈ ರಸ್ತೆಯಲ್ಲಿ ವಾಹನಗಳ
ಸಂಚಾರ ಅಧಿಕವಾಗಿದೆ. ಈ ಸೇತುವೆ ನಿರ್ಮಾಣದ ನಂತರ
ಲೋಕೋಪಯೋಗಿ ಇಲಾಖೆಯು ಸೋಲಾರ್ ಬೀದಿ
ದೀಪಗಳನ್ನು ಕೂಡ ಅಳವಡಿಸಲಾಗಿತ್ತು. ಇದೀಗ
ಎರಡು ಸೋಲಾರ್ ದೀಪಗಳನ್ನು ಕಳ್ಳರು ಎಗರಿಸಿದ್ದಾರೆ.
ಈ ನೂತನ ಸೇತುವೆ
ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಸಹಿತ ಕಳ್ಳಸಾಗಣೆಯಂತಹ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಉಳಿದ
ದಾರಿ ದೀಪಗಳು ಕಳ್ಳರ ಪಾಲಾಗಲಿದ್ದು ಸ್ಥಳೀಯಾಡಳಿತ
ಮತ್ತು ಪೊಲೀಸರು ಕ್ರಮ ಕೈಗೊಳ್ಳುವಂತೆ ಆ ಭಾಗದ ನಾಗರಿಕರು
ಒತ್ತಾಯಿಸಿದ್ದಾರೆ.
ಸುಳ್ಯ-ಕಡಬ ಉಭಯ ತಾಲೂಕಿನ ಸಂಪರ್ಕ ಕೊಂಡಿಯಾಗಿರುವ ಈ ಪ್ರದೇಶಕ್ಕೆ ಪೊಲೀಸರು ಗಸ್ತು ತಿರುಗಬೇಕು ಜೊತೆಗೆ ಸೇತುವೆ ಬಳಿ ಸಿಸಿಟಿವಿ ಅಳವಡಿಸಬೇಕಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಕಡಬ ಟೈಮ್ಸ್ ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪರಿಷದ್ ಮಾಜಿ ಸದಸ್ಯ, ಪಾಲೋಲಿ ಸೇತುವೆ ನಿರ್ಮಾಣದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಯ್ಯದ್ ಮೀರಾ ಸಾಹೇಬ್ ಅವರು ಲೋಕೋಪಯೋಗಿ ಇಲಾಖೆಯ ಸಚಿವರು ಈ ಸೇತುವೆಯನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಅದಕ್ಕೂ ಮುನ್ನವೇ ದಾರಿ ದೀಪಗಳನ್ನು ಕಳ್ಳರು ಕದ್ದೊಯ್ದಿರುವುದು ಆತಂಕಕಾರಿಯಾಗಿದೆ. ಕೂಡಲೇ ಪೊಲೀಸರು ಕರ್ಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.