


ಕಡಬ: ಪ್ರಜಾ ಧ್ವನಿ ಕರ್ನಾಟಕದ ವತಿಯಿಂದ 1949 ನವೆಂಬರ್ 26 ಸಂವಿಧಾನದ ಸಮರ್ಪಣಾ ದಿನ ನೆನಪಿನ ಪ್ರಯುಕ್ತ ನವಂಬರ್ 27 ಬುಧವಾರದಂದು ರಾಷ್ಟ್ರಧ್ವಜ ಗೌರವ ಯಾತ್ರೆಗೆ ಕಡಬದ ತಾಲೂಕು ಆಡಳಿತ ಸೌಧದ ಬಳಿ ಚಾಲನೆ ನೀಡಲಾಯಿತು.
ಯಾತ್ರೆಯ ಉದ್ಘಾಟನೆಯನ್ನು ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ನೆರವೇರಿದರು. ಕಡಬ ಠಾಣಾ ಉಪನೀರಿಕ್ಷಕ ಅಭಿನಂದನ್ ಎಂ ಎಸ್ ಸಂವಿಧಾನ ಪೀಠಿಕೆ ವಾಚಿಸಿದರು. ಕಾರ್ಯಕ್ರಮ ಸಂಚಾಲಕ ಮಾಜಿ ಸೈನಿಕ ಮ್ಯಾಥ್ಯು ಟಿ.ಜಿ ಮಾತನಾಡಿ ಗೌರವ ಯಾತ್ರೆಯು ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಬಳಿಕ ವಾಹನ ಜಾಥವು ಸಾರ್ವಜನಿಕರ ವಾಹನಗಳ ಮುಖಾಂತರ ಕಡಬ ಮುಖ್ಯ ಪೇಟೆಯ ಮೂಲಕ ಪಂಜದತ್ತ ತೆರಳಿತು. ತಾ.ಪಂ ಮಾಜಿ ಸದಸ್ಯ ಫಝಲ್ ಕೋಡಿಂಬಾಳ ಸ್ವಾಗತಿಸಿದರು. ಸೆಬಿಷ್ಟಿಯನ್ ಕೆ.ಕೆ ವಂದಿಸಿದರು. ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ .ಈ ಸಮಾರಂಭ ಪುತ್ತೂರು ಸಹಾಯಕ ಆಯುಕ್ತರಾದ ಜುಬಿನ್ ಮಹಾಪಾತ್ರ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.