




![]() |
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. |
ಕುಕ್ಕೆ ಸುಬ್ರಹ್ಮಣ್ಯ
:ಚಂಪಾ ಷಷ್ಠಿ ಜಾತ್ರೆಯ ಹಿನ್ನೆಲೆ ಭರದಿಂದ ಸಿದ್ದತೆಗಳು
ನಡೆದಿದ್ದು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಯತೀಶ್
ಎನ್. ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸುಬ್ರಹ್ಮಣ್ಯ
ಪೊಲೀಸ್ ಠಾಣೆಗೆ ಆಗಮಿಸಿ ಅಧಿಕಾರಿಗಳ ಜೊತೆ ಚರ್ಚಿಸಿ ಬಳಿಕ ಮಾಧ್ಯಮದ ಜೊತೆ ಮಾತನಾಡಿದ
ಅವರು ಇಲಾಖೆಯಿಂದ ಎಲ್ಲಾ ರೀತಿಯ ಬಂದೋಬಸ್ತ್ ಮಾಡಿದ್ದೇವೆ, ಕುಕ್ಕೆಗೆ ಆಗಮಿಸುವ ಯತ್ರಾರ್ಥಿಗಳಿಗೆ ನಿರ್ದಿಷ್ಟವಾದ ಸ್ಥಳದಲ್ಲಿ ಪಾರ್ಕಿಂಗ್ ಮಾಡಲು ಹಾಗೂ ದೇವರ ದರ್ಶನ ಮಾಡಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ದೇಗುಲದ
ಆಡಳಿತ ಮಂಡಳಿಯ ಸಹಕಾರದೊಂದಿಗೆ ಪಾರ್ಕಿಂಗ್ ಮಾಡಲು ನಿರ್ದಿಷ್ಟ
ಸ್ಥಳಗಳನ್ನು ಗುರುತಿಸಲಾಗುತ್ತಿದೆ,
ಸಾರ್ವಜನಿಕರ ಹಿತದೃಷ್ಟಿಯಿಂದ
ಕೆಲ ಸಂಚಾರಿ ನಿಯಮಗಳನ್ನು ಜಾರಿ
ಮಾಡುವುದರಿಂದ ಸಾರ್ವಜನಿಕರು ಪೊಲೀಸರ ಜೊತೆ
ಸಹಕರಿಸಬೇಕೆಂದರು.
ಕುಕ್ಕೆ ಸುಬ್ರಹ್ಮಣ್ಯದ ನೂತನ ಪೊಲೀಸ್ ಠಾಣೆಯು ನ.30 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಇದೇ ವೇಳೆ ತಿಳಿಸಿದರು. ಹೆಚ್ಚುವರಿ ಎಸ್ .ಪಿ,ರಾಜೇಂದ್ರ, ಡಿ.ಎೈ.ಎಸ್.ಪಿ.ಅರುಣ್ ನಾಗೆ ಗೌಡ,ಸರ್ಕಲ್ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್, ಸಬ್ ಇನ್ಸ್ಪೆಕ್ಟರ್ ಕಾರ್ತಿಕ್, ಉಪಸ್ಥಿತರಿದ್ದರು.