



ಕಡಬ ಟೈಮ್ , ಸುಳ್ಯ: ವೃದ್ದಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲೆಂದು ಬಂದಿದ್ದ ಹಿರಿಯ ವ್ಯಕ್ತಿಯೊಬ್ಬರು ತಾಲೂಕು ಕಚೇರಿಯ ಪಡಶಾಲೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಸುಳ್ಯದಿಂದ ವರದಿಯಾಗಿದೆ.
ಸುಳ್ಯದ
ಅಡ್ಕಾರಿನ ರಾಘವ ಆಚಾರ್ಯ
(65 ವರ್ಷ) ಎಂಬವರು ವೃದ್ದಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲೆಂದು ನ.26ರಂದು ಸುಳ್ಯ ತಾಲೂಕು
ಕಚೇರಿಯ ಪಡಶಾಲೆಗೆ ಬಂದಿದ್ದರು. ಅರ್ಜಿ ಸ್ವೀಕರಿಸಿದ ಅಲ್ಲಿನ ಸಿಬ್ಬಂದಿ ಒಟಿಪಿ
ಬರುವವರೆಗೆ ಕುಳಿತುಕೊಳ್ಳಲು ಹೇಳಿದ್ದರು.
ಸ್ವಲ್ಪ ಹೊತ್ತಲ್ಲಿ ಒಟಿಪಿ ಬಂದಾಗ ಸಿಬ್ಬಂದಿಯು ಕೌಂಟರ್ ಬಳಿಗೆ ಹಿರಿಯ ವ್ಯಕ್ತಿಯನ್ನು ಕರೆದಿದ್ದರು. ಕುಳಿತಲ್ಲಿಂದ ಎದ್ದು ಕೌಂಟರ್ ಬಳಿಗೆ ಬರುತ್ತಿದ್ದಂತೆ ಹಿರಿಯ ವ್ಯಕ್ತಿ ಕುಸಿದು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ತಕ್ಷಣ ಅಲ್ಲಿನ ಸಿಬ್ಬಂದಿ ಅವರ ಮುಖಕ್ಕೆ ನೀರು ಹಾಕಿ ಎತ್ತಿ ಬೆಂಚಲ್ಲಿ ಮಲಗಿಸಿ, ಅಂಬ್ಯುಲೆನ್ಸ್ಗೆ ಫೋನಾಯಿಸಿದರು. ಅಂಬ್ಯುಲೆನ್ಸ್ ಬರುವ ವೇಳೆಗೆ ಇವರು ಕೊನೆಯುಸಿರೆಳೆದಿದ್ದರೆನ್ನಲಾಗಿದೆ. ಅಂಬ್ಯುಲೆನ್ಸ್ನಲ್ಲಿ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.