ಕಡಬ: ಬಿಳಿನೆಲೆ ಬಳಿ ಸರ್ಕಾರಿ ಬಸ್ಸುಗಳ ನಡುವೆ ಅಪಘಾತ :ಹಲವು ಪ್ರಯಾಣಿಕರಿಗೆ ಗಾಯ

ಕಡಬ: ಬಿಳಿನೆಲೆ ಬಳಿ ಸರ್ಕಾರಿ ಬಸ್ಸುಗಳ ನಡುವೆ ಅಪಘಾತ :ಹಲವು ಪ್ರಯಾಣಿಕರಿಗೆ ಗಾಯ

Kadaba Times News

ಕಡಬ: ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ ಬಳಿ ಬಸ್ಸುಗಳೆರಡು ಮುಖಾಮುಖಿ ಡಿಕ್ಕಿಯಾದ ಘಟನೆ ಆ.1ರ ಮಧ್ಯಾಹ್ನ ಸಂಭವಿಸಿದೆ.

 

ಬಿಳಿನೆಲೆ ಸಿ.ಪಿ.ಸಿ.ಆರ್.ಐ ಬಳಿ ಈ ಅಪಘಾತ ನಡೆದಿದ್ದು ಬಸ್ಸಿನಲ್ಲಿದ್ದ  ಕೆಲ ಪ್ರಯಾಣಿಕರಿಗೆ ಗಾಯವಾಗಿದ್ದು ಎರಡೂ  ಬಸ್ಸುಗಳ ಮುಂಭಾಗ ಭಾಗಶ: ಹಾನಿಯಾಗಿದೆ



ತಿರುವುಗಳಿಂದ ಕೂಡಿರುವ ಈ ರಸ್ತೆಯಲ್ಲಿ ತೀವ್ರ ಮಳೆಯ ನಡುವೆ   ಅತೀ ವೇಗದಿಂದ ಸಂಚರಿಸಿರುವುದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.   


ಮಾಹಿತಿ ತಿಳಿದು ಕಡಬ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೆಲ ಹೊತ್ತು ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.     ಈ ಕುರಿತು ಹೆಚ್ಚಿನ ಮಾಹಿತಿ  ನಿರೀಕ್ಷಿಸಲಾಗುತ್ತಿದೆ.

Tags

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top