


ಕಡಬ: ಇಲ್ಲಿನ ಕುಮಾರಧಾರ ನದಿ ಸಮೀಪದ ಅರ್ಬಿತೋಡು ವ್ಯಕ್ತಿಯೊಬ್ಬರ ಶವ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ಐತ್ತೂರು ಗ್ರಾ.ಪಂ ವ್ಯಾಪ್ತಿಯ ನೆಕ್ಕಿಲಾಡಿ ಗ್ರಾಮದ ಕೆರ್ಮಾಯಿಯ ರಮೇಶ ಎಂಬ ವ್ಯಕ್ತಿ ಎಂದು
ಹೇಳಲಾಗುತ್ತಿದೆ.
ಕೆ.ಎಫ್,ಡಿ ಸಿ ಯ ಅರ್ಬಿತೋಡು ಬಳಿ ನದಿಯಲ್ಲಿ ಬರುವ ತೆಂಗಿನ ಕಾಯಿ ತೆಗೆಯುವ ಸಲುವಾಗಿ ನದಿ ಪಕ್ಕ
ಇಳಿದಿರುವ ಶಂಕೆ ವ್ಯಕ್ತವಾಗಿದೆ. ಹೆಚ್ಚಿನ ಮಾಹಿತಿ
ಪೊಲೀಸರ ಪರಿಶೀಲನೆ ಬಳಿಕ ತಿಳಿದು ಬರಲಿದೆ.