Electrical Shock :ಉಪ್ಪಿನಂಗಡಿ ಬಳಿ ನಡೆದ ದುರ್ಘಟನೆ: ಮನೆಗೆ ಕರೆಂಟ್ ಬರುತ್ತಿಲ್ಲವೆಂದು ಪರಿವರ್ತಕದ ಬಳಿ ಹೋದ ಯುವಕ ಕರೆಂಟ್ ಶಾಕ್ ಹೊಡೆದು ಮೃತ್ಯು

Electrical Shock :ಉಪ್ಪಿನಂಗಡಿ ಬಳಿ ನಡೆದ ದುರ್ಘಟನೆ: ಮನೆಗೆ ಕರೆಂಟ್ ಬರುತ್ತಿಲ್ಲವೆಂದು ಪರಿವರ್ತಕದ ಬಳಿ ಹೋದ ಯುವಕ ಕರೆಂಟ್ ಶಾಕ್ ಹೊಡೆದು ಮೃತ್ಯು

Kadaba Times News

 ಉಪ್ಪಿನಂಗಡಿ:  ವಿದ್ಯುತ್ ಶಾಕ್ ಹೊಡೆದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿದ ಘಟನೆ  ಉಪ್ಪಿನಂಗಡಿ ಸಮೀಪದ  ಇಳಂತಿಲ ಗ್ರಾಮದಲ್ಲಿ ಸೋಮವಾರ ಮುಂಜಾನೆ ನಡೆದಿದೆ.

ಇಳಂತಿಲ ಗ್ರಾಮದ ಗೋಳಿದಡಿ ತಿಮ್ಮಪ್ಪಗೌಡ ಎಂಬವರ ಪುತ್ರ ಹರೀಶ್ ಗೌಡ (35) ಸಾವನ್ನಪ್ಪಿದ ಯುವಕ.



 ತನ್ನ ಮನೆಗೆ ವಿದ್ಯುತ್ ಬರುತ್ತಿಲ್ಲವೆಂದು  ವಿದ್ಯುತ್ ಪರಿವರ್ತಕದ ಬಳಿ ಪ್ಯೂಸ್ ಹಾಕಲು ಯತ್ನಿಸಿದಾಗ ವಿದ್ಯುತ್ ಶಾಕ್ ಹೊಡೆದಿದೆ ಎನ್ನಲಾಗಿದೆ.  ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

ಮೃತ ಯುವಕ ಅಡಿಕೆ ಸುಲಿಯುವ ಕೆಲಸ ಮಾಡುತ್ತಿದ್ದು ಕಬಡ್ಡಿ ಆಟಗಾರನಾಗಿ ಪ್ರಸಿದ್ದಿ ಪಡೆದಿದ್ದರು.  ಪೊಲೀಸರು ಹಾಗೂ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top