ಕಡಬ:ನಿಯಂತ್ರಣ ತಪ್ಪಿ ತೋಟಕ್ಕೆ ನುಗ್ಗಿದ ಓಮಿನಿ ಕಾರು:ಜೀವ ಉಳಿಸಿದ ತೆಂಗಿನ ಮರ, ಮಹಿಳೆ ಆಸ್ಪತ್ರೆಗೆ ದಾಖಲು

ಕಡಬ:ನಿಯಂತ್ರಣ ತಪ್ಪಿ ತೋಟಕ್ಕೆ ನುಗ್ಗಿದ ಓಮಿನಿ ಕಾರು:ಜೀವ ಉಳಿಸಿದ ತೆಂಗಿನ ಮರ, ಮಹಿಳೆ ಆಸ್ಪತ್ರೆಗೆ ದಾಖಲು

Kadaba Times News

 ಕಡಬ: ಇಲ್ಲಿನ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ದಾಳ ಬಳಿ ಒಮ್ನಿ ಕಾರೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು  ತೋಟಕ್ಕೆ ನುಗ್ಗಿದ್ದು  ಮಹಿಳೆಯೊಬ್ಬರು  ಆಸ್ಪತ್ರೆಗೆ ದಾಖಲಾದ ಘಟನೆ ಜುಲೈ 9 ಸಂಜೆ ನಡೆದಿದೆ.


ಕಡಬ:  ಮರ್ದಾಳ ಸಮೀಪದ  ನೆಕ್ಕಿತ್ತಡ್ಕ ಬಳಿ ಘಟನೆ ನಡೆದಿದೆ.  ಚಾಲಕ ಕೊಡಿಂಬಾಳ ಗ್ರಾಮದ ಕೊಡಂಕೇರಿಯ   ದಾಮೋದರ ಗೌಡ ಎಂಬವರು ಚಲಾಯಿಸುತ್ತಿದ್ದ  ವಾಹನದ ಇದಾಗಿದೆ. ಮಹಿಳೆಯೊಬ್ಬರಿಗೆ ಗಾಯವಾಗಿದ್ದು  ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. 

 



ವಾಹನ ನಿಯಂತ್ರಣ ಕಳೆದುಕೊಂಡು  ರಸ್ತೆ ಬದಿಯ ತೋಟಕ್ಕೆ ನುಗ್ಗಿದೆ. ಬಳಿಕ ತೆಂಗಿನ ಮರಕ್ಕೆ ಗುದ್ದಿ ನಿಂತಿದ್ದು ವಾಹನದಲ್ಲಿದ್ದವರು   ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಓಮ್ನಿ  ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು   ಸ್ಥಳೀಯರು ಮತ್ತು ವಾಹನ ಸವಾರರು ವಾಹನವನ್ನು ಮೇಲಕ್ಕೆತ್ತಲು ಸಹಕರಿಸಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top