ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿ: ಮಳೆ ಇಲ್ಲದಿರುವಾಗ ರೋಡು, ಮಳೆ ಬಂದಾಗ ತೋಡು:ಕನಿಷ್ಟ ಚರಂಡಿ ಸರಿ ಮಾಡಿಕೊಡಿ ಎನ್ನುತ್ತಿರುವ ಜನರು

ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿ: ಮಳೆ ಇಲ್ಲದಿರುವಾಗ ರೋಡು, ಮಳೆ ಬಂದಾಗ ತೋಡು:ಕನಿಷ್ಟ ಚರಂಡಿ ಸರಿ ಮಾಡಿಕೊಡಿ ಎನ್ನುತ್ತಿರುವ ಜನರು

Kadaba Times News

 ಕಡಬ ಪಟ್ಟಣ: ಎಡೆಬಿಡದೆ ಸುರಿಯುವ ಮಳೆಗೆ ಹಲವೆಡೆ ರಸ್ತೆ ಸರಿಇಲ್ಲ ಎಂಬ ಕೂಗು ಕೇಳಿ ಬರುತ್ತಿದೆ. ಇದೀಗ  ಕಡಬ ಪಟ್ಟಣ ಪಂಚಾಯತ್  ವ್ಯಾಪ್ತಿಯ   ಕಲ್ಲಂತಡ್ಕ ಮಡಿವಾಳ್ತಿ ಪರಪ್ಪು ರಸ್ತೆಯಲ್ಲಿ  ನೀರು ಹರಿದು ಹೋಗಿ  ರಸ್ತೆಯು ತೋಡಿನಂತಾಗಿದೆ  .


ಕಡಬ-ಪಂಜ ರಾಜ್ಯ ಹೆದ್ದಾರಿಯ ಕೋಡಿಂಬಾಳ ಗ್ರಾಮದ ಕಲ್ಲಂತ್ತಂಡ್ಕ ಬಸ್ ತಂಗುತಾಣದ ಹಿಂಬದಿಯಲ್ಲಿರುವ ರಸ್ತೆಯೇ ಮಡಿವಾಳ್ತಿಪರಪ್ಪು ರಸ್ತೆ.  ಸದ್ಯ ಈ ರಸ್ತೆಯಲ್ಲಿ ಸಾಗುವ ನಿವಾಸಿಗಳು ಕನಿಷ್ಟ  ಚರಂಡಿಯನ್ನು ದುರಸ್ತಿ ಮಾಡಿ ಕೊಡಿ ಎಂದು ಸ್ಥಳೀಯಾಡಳಿತವನ್ನು ಒತ್ತಾಯಿಸುತ್ತಿದ್ದಾರೆ.




ಮುಖ್ಯ ರಸ್ತೆಯಿಂದ  ಮೋರಿ ಮೂಲಕ ಬರುವ ನೀರು ಈ  ರಸ್ತೆಯಲ್ಲಿರುವ ಕಿರಿದಾದ ಚರಂಡಿಯನ್ನು ಸೇರಿಕೊಳ್ಳುತ್ತದೆ. ಈ ರಸ್ತೆಯ ಚರಂಡಿಗಳಲ್ಲಿ ಗಿಡಗಂಟಿಗಳಿಂದ ಆವೃತವಾಗಿದೆ.   ಜೋರು ಮಳೆ ಸುರಿಯುವ  ಸಂದರ್ಭದಲ್ಲಿ ಈ ರಸ್ತೆ ಸಂಪೂರ್ಣ  ತೋಡಿನಂತಾಗಿ ಬದಲಾಗುತ್ತಿದೆ.


ಈ ರಸ್ತೆಯ ಎರಡೂ ಬದಿಯಲ್ಲಿ ಚರಂಡಿಗಳು ಸಮರ್ಪಕವಾಗಿಲ್ಲದಿರುವುದೇ ಈ ಸಮಸ್ಯೆಗೆ ಕಾರಣ ಎನ್ನುವುದು ಸ್ಥಳೀಯರ ದೂರು.   ಮುಖ್ಯ ರಸ್ತೆಯಿಂದ ಸುಮಾರು ನೂರು ಮೀಟರ್ ನಷ್ಟು ಕಾಂಕ್ರೀಟಿರಣ ಮಾಡಲಾಗಿದೆ. ಮುಂದಕ್ಕೆ ಮಣ್ಣಿನ ರಸ್ತೆಯಿದ್ದು ಮುಖ್ಯ ರಸ್ತೆಯಿಂದ ಮೋರಿ ಮೂಲಕ ಹರಿಯುವ ನೀರು ಈ ರಸ್ತೆಯಲ್ಲಿ ಹರಿದು ಕೆಸರುಮಯವಾಗಿದೆ.ಈ ರಸ್ತೆಯು ಕೊಪ್ಪ ಪ್ರದೇಶವನ್ನು ಸಂಪರ್ಕಿಸುತ್ತದೆ.


ಹೀಗಾಗಿ ವಾಹನ ಸವಾರರು ಸಂಕಷ್ಟ ಪಡುತ್ತಿದ್ದಾರೆ. ಹಲವು ಮನೆಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಗೆ ಚಂರಡಿ ಸರಿಪಡಿಸಿದಲ್ಲಿ ಸಂಚಾರಯೋಗ್ಯವಾಗಲಿದೆ ,ಪಟ್ಟಣ ಪಂಚಾಯತ್ ಚರಂಡಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರಾದ ಜಗದೀಶ್ ಅವರು ಒತ್ತಾಯಿಸಿದ್ದಾರೆ.


Tags

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top