ಆಲಂಕಾರು:ಕೊಯಿಲದಲ್ಲಿ ಬೆನ್ನಟ್ಟಿ ವಾಹನ ಸಹಿತ ದನವನ್ನು ವಶಕ್ಕೆ ಪಡೆದ ಪೊಲೀಸರು

ಆಲಂಕಾರು:ಕೊಯಿಲದಲ್ಲಿ ಬೆನ್ನಟ್ಟಿ ವಾಹನ ಸಹಿತ ದನವನ್ನು ವಶಕ್ಕೆ ಪಡೆದ ಪೊಲೀಸರು

Kadaba Times News

ಕಡಬ ಟೈಮ್ಸ್(KADABA TIMES):ಆಲಂಕಾರು/ಕೊಯಿಲ: ಅನುಮತಿ ರಹಿತವಾಗಿ  ಜಾನುವಾರು ಸಾಗಾಟ ಮಾಡುತ್ತಿರುವ ಮಾಹಿತಿ ಮೇರೆಗೆ   ಜಾನುವಾರು ಸಹಿತ ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಕೊಯಿಲ ಗ್ರಾಮದಲ್ಲಿ ಬುಧವಾರದಂದು ನಡೆದಿದೆ.

ಆನೆಗುಂಡಿ ಎಂಬಲ್ಲಿ  ಈ ಘಟನೆ ನಡೆದಿದ್ದು   ನಝೀರ್ ಹಾಗೂ ರತ್ನಾಕರ ಎಂಬವರು ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.ಈ  ವೇಳೆ ಎಸ್.ಐ  ಆಂಜನೇಯ ರೆಡ್ಡಿಯವರು ಆನೆಗುಂಡಿ ಸಮೀಪ ವಾಹನವನ್ನು ನಿಲ್ಲಿಸಲು ಸೂಚಿಸಿದರೂ, ನಿಲ್ಲಿಸದೆ ಪರಾರಿಯಾಗಲೆತ್ನಿಸಿದ ಕಾರಣ ಪಿಕಪ್ ವಾಹನವನ್ನು ಬೆನ್ನಟ್ಟಿ ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top