ಕಾರು-ಬಸ್ ಅಪಘಾತ : ಸುಳ್ಯದ ಮೂವರು ಯುವಕರಿಗೆ ಗಾಯ

ಕಾರು-ಬಸ್ ಅಪಘಾತ : ಸುಳ್ಯದ ಮೂವರು ಯುವಕರಿಗೆ ಗಾಯ

Kadaba Times News

ಕಡಬ ಟೈಮ್ಸ್(KADABA TIMES):ಸುಳ್ಯ/ಮದೆನಾಡು: ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಆಲ್ಟೊ ಕಾರು ಮತ್ತು ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಸರ್ಕಾರಿ ಬಸ್ ಮದೆನಾಡು ಎಂಬಲ್ಲಿ ಪರಸ್ಪರ ಡಿಕ್ಕಿಯಾಗಿ ಕಾರಿನಲ್ಲಿದ್ದ ಸುಳ್ಯದ ಮೂವರು ಯುವಕರು ಗಾಯಗೊಂಡ ಘಟನೆ ವರದಿಯಾಗಿದೆ.

ಸುಳ್ಯ ಜಯನಗರ ಯುವಕರು ಮಡಿಕೇರಿ ಕಡೆಯಿಂದ ‌ಸುಳ್ಯಕ್ಕೆ‌ KL 11 v 5200 ಆಲ್ಟೊ ಕಾರಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಮದೆನಾಡು ಬಳಿ ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕೆ ಎಸ್ ಆರ್ ಟಿ‌‌ ಸಿ KA 19 F 3155 ಬಸ್ ಗೇ ಡಿಕ್ಕಿಯಾಗಿದೆ.  ಜಯನಗರದ ಸಿನಾನ್ ,ಅತ್ತಾವುಲ್ಲಾ,ಸಿರಾಜ್ ಅವರಿ‌ಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗೆ ಸುಳ್ಯ ಅಸ್ಪತ್ರೆ ದಾಖಲಿಸಿದ್ದಾರೆ.

ಸರ್ಕಾರಿ ಬಸ್‌ನವರಿಗೆ 6000 ನೀಡಿ ಅಪಘಾತ ಕೇಸನ್ನು ‌ರಾಜಿಯಲ್ಲಿ‌ ಇತ್ಯರ್ಥಪಡಿಸಿದ್ದೇವೆ ಎಂದು ಅಪಘಾತದಲ್ಲಿ ‌ಗಾಯಗೊಂಡ‌ ಯುವಕರು ತಿಳಿಸಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top