ಕಡಬದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ | ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಸಮುದಾಯಕ್ಕೆ ಹೆಚ್ಚಿನ ಅವಕಾಶ ದೊರೆಯಬೇಕು-ಕೆ.ಎಸ್.ದಿನೇಶ್ ಆಚಾರ್ಯ

ಕಡಬದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ | ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಸಮುದಾಯಕ್ಕೆ ಹೆಚ್ಚಿನ ಅವಕಾಶ ದೊರೆಯಬೇಕು-ಕೆ.ಎಸ್.ದಿನೇಶ್ ಆಚಾರ್ಯ

Kadaba Times News

ಕಡಬ ಟೈಮ್ಸ್ (KADABA TIMES):ಕಡಬ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ಆಶ್ರಯದಲ್ಲಿ   ಸರಕಾರದ ಆದೇಶದಂತೆ    ಶ್ರೀ ವಿಶ್ವಕರ್ಮ   ಜಯಂತಿ  ಆಚರಣೆ ಕಾರ್ಯಕ್ರಮವು ಕಡಬ ತಹಶಿಲ್ದಾರ್ ಕಛೇರಿಯಲ್ಲಿ ಗುರುವಾರ ನಡೆಯಿತು.

ಕಡಬ ತಹಶೀಲ್ದಾರ್ ಜಾನ್‌ಪ್ರಕಾಶ್ ರೋಡ್ರಿಗಸ್  ಶ್ರೀ ವಿಶ್ವಕರ್ಮ ದೇವರ ಭಾವಚಿತ್ರಕ್ಕೆ  ಪುಷ್ಪಾರ್ಚನೆಗೈದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ವಿಶ್ವಕರ್ಮ ಕೇವಲ ಓರ್ವ ದೇವತಾ ಸ್ವರೂಪಿ ಮಾತ್ರವಲ್ಲ. ಆತ ಜಗತ್ತಿನ ಪ್ರಥಮ ಇಂಜಿನಿಯರ್ ಎನ್ನುವ ಹಿರಿಮೆಯನ್ನು ಪಡೆದವನು  ಎಂದರು.  ವಿಶ್ವಕರ್ಮ ಸಮಾಜದ ಮುಂದಾಳು ಕೆ.ಎಸ್.ದಿನೇಶ್ ಆಚಾರ್ಯ, ಅವರು ಮಾತನಾಡಿ ವಿಶ್ವಕರ್ಮ ಸಮಾಜ ನಿರ್ಮಾಣ ಕೌಶಲ ಹಾಗೂ ಶಿಲ್ಪ ಕಲಾ ನಿಪುಣತೆಯಿಂದ ಉನ್ನತ ಸ್ಥಾನದಲ್ಲಿದ್ದರೂ  ಸಾಮಾಜಿಕವಾಗಿ ಅವಕಾಶ ವಂಚಿತ ಸಮುದಾಯ ಎಂದೇ ಹೇಳಬಹುದು.  ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಸಮುದಾಯಕ್ಕೆ ಹೆಚ್ಚಿನ ಅವಕಾಶಗಳು ದೊರೆಯುವಂತಾಗಬೇಕು ಎಂದರು.

ಕಡಬ ಶ್ರೀ ವಿಶ್ವಕರ್ಮ ಸಂಘದ ಅಧ್ಯಕ್ಷೆ ಸರೋಜಿನಿ ಎಸ್. ಆಚಾರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಡಬ ತಾಲೂಕು ಕಚೇರಿಯ ಉಪ ತಹಶೀಲ್ದಾರ್ ನವ್ಯಾ, ಉಪ ತಹಶೀಲ್ದಾರ್ ಕೆ.ಟಿ.ಮನೋಹರ್, ಕಡಬ ಶ್ರೀ ವಿಶ್ವಕರ್ಮ ಸಂಘದ ಪದಾಧಿಕಾರಿಗಳು, ಕಂದಾಯ ಇಲಾಖಾ ಸಿಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top