ಹಣ ಸಂಗ್ರಹಿಸಿ ವಂಚನೆ ಮಾಡಿರುವ ಆರೋಪ |ರಾಜು ಹೊಸಮಠ ಮತ್ತು ಪರಮೇಶ್ವರ ವಿರುದ್ದ ಠಾಣೆಯಲ್ಲಿ ದೂರು ‌ದಾಖಲು

ಹಣ ಸಂಗ್ರಹಿಸಿ ವಂಚನೆ ಮಾಡಿರುವ ಆರೋಪ |ರಾಜು ಹೊಸಮಠ ಮತ್ತು ಪರಮೇಶ್ವರ ವಿರುದ್ದ ಠಾಣೆಯಲ್ಲಿ ದೂರು ‌ದಾಖಲು

Kadaba Times News

ಕಡಬ ಟೈಮ್ಸ್ (KADABA TIMES):ಕರ್ನಾಟಕ ಕ್ರಾಂತಿಕಾರಿ ಸೇನೆ ಎಂಬ ಹೆಸರಿನಲ್ಲಿ ಸದಸ್ಯತ್ವಕ್ಕಾಗಿ ಹಣ ಸಂಗ್ರಹ ಮಾಡಿ ವಂಚನೆ ಮಾಡಿರುವುದಾಗಿ ಆರೋಪಿಸಿ ಡಾ. ಪರಮೇಶ್ವರ ಮತ್ತು ಕರ್ನಾಟಕ ಅಂಬೇಡ್ಕರ್ ಅಪತ್ಬಾಂಧವ ಟ್ರಸ್ಟ್ ನ ಜಿಲ್ಲಾ ಮುಖಂಡ ರಾಜು ಹೊಸ್ಮಠ ವಿರುದ್ಧ ಮಹಿಳೆಯರು ಶನಿವಾರ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.

ದಲಿತ್ ಸೇವಾ ಸಮಿತಿ ಮೂಲಕ ಮುನ್ನೆಲೆಗೆ ಬಂದ ರಾಜು ಹೊಸಮಠ ಅವರು ಸಂಘಟನೆಯೊಳಗೆ ಭಿನ್ನಾಭಿಪ್ರಾಯ ಬಂದು ಪ್ರತ್ಯೇಕ ಸಂಘನೆ ಕಟ್ಟಿ ಸಕ್ರೀಯರಾಗಿದ್ದರು.

ಇದೀಗ ಸಹಾಯಧನ ನೀಡುವುದಾಗಿ ಹೇಳಿ ಇವರು ಮಹಿಳೆಯರಿಂದ ತಲಾ ರೂ.150ರಂತೆ ಸಂಗ್ರಹ ಮಾಡಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಬ್ಯಾಂಕ್ ದಾಖಲೆ ಪಡೆದು ವಂಚಿಸಿರುವುದಾಗಿ ಆರೋಪಿಸಿದ್ದಾರೆ. ಅಲ್ಲದೆ ಡಾ. ಪರಮೇಶ್ವರ ಎಂಬುವರು ಬ್ಯಾಂಕ್ ಖಾತೆ ನಂಬರ್ ಐಎಫ್ ಸಿ ಕೋಡ್ ಮತ್ತು ಓಟಿಪಿ ನಂಬರ್ ಗಳನ್ನು ಪಡೆದುಕೊಂಡು ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಪಡೆದಿರುತ್ತಾರೆ ಎಂದು ವಂಚನೆಗೊಳಗಾದ ಮಹಿಳೆಯರು ದೂರು ದಾಖಲಿಸಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top