




ಕಡಬ ಟೈಮ್ಸ್, ಅರಿಯಡ್ಕ : ಸವಣೂರಿನ ಅರಿಯಡ್ಕ ಅಯ್ಯಪ್ಪ ಸೇವಾ ಸಮಿತಿ ಇದರ ವತಿಯಿಂದ 2020 ಡಿಸೆಂಬರ್ ನಲ್ಲಿ ನಡೆಸಲು ಉದ್ದೇಶಿಸಿರುವ ಸ್ವಾಮಿ ಅಯ್ಯಪ್ಪ ದೀಪೋತ್ಸವ, ಪಾಲ್ ಕೊಂಬು ಮೆರವಣಿಗೆ, ಕೆಂಡ ಸೇವೆ,ಅಪ್ಪ ಸೇವೆ ಇದರ ಸಂಯೋಜನೆಗಾಗಿ ಸಮಿತಿ ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಬಾಬು ಗುರುಸ್ವಾಮಿ ಎರ್ಕ,ಅಧ್ಯಕ್ಷರಾಗಿ ಬಾಬು ಮಾಸ್ತರ್ ತೆಗ್ಗು,ಉಪಾಧ್ಯಕ್ಷರಾಗಿ ಬಾಬು ಕಲ್ಲಡ್ಕ, ಮೋಹನ್ ತೋಟ ಚಾವಡಿ,ಗಿರೀಶ್ ಗೌಡ ಪಾಪೆಮಜಲು,ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ಚೆನ್ನಾವರ,ಉಪ ಕಾರ್ಯದರ್ಶಿಯಾಗಿ ವಿನೋದ್ ಸುರುಳಿಮೂಲೆ,ಕೋಶಾಧಿಕಾರಿಯಾಗಿ ದೇವಿಪ್ರಸಾದ್ ಕೆಮನಡ್ಕ ,ಸಂಘಟನಾ ಕಾರ್ಯದರ್ಶಿಯಾಗಿ ಪವಿತ್ರ ರೈ ಕಾರ್ಪಾಡಿ,ಬಾಲಕೃಷ್ಣ ಮಿನೋಜಿಕಲ್ಲು,ಚಿದಾನಂದ ಮಿನೋಜಿಕಲ್ಲು,ವಿನೋದ್ ಅಕಾಯಿ,ಭರತ್ ತ್ಯಾಗರಾಜನಗರ ಅವರನ್ನು ಆಯ್ಕೆ ಮಾಡಲಾಯಿತು.

ಉಳಿದಂತೆ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದ್ದು,ವಿವಿಧ ಭಾಗಗಳಿಂದ ಜನರನ್ನು ಆಯ್ಕೆ ಮಾಡಲಾಯಿತು.