




ಕಡಬ ಟೈಮ್ಸ್, ಆಲಂಕಾರು: ಕಡಬ ತಾಲೂಕಿನ ಪೆರಾಬೆ ಗ್ರಾಮದ ಪರಾರಿಗುತ್ತಿನಲ್ಲಿ ಶನಿವಾರದಂದು ವೇ|ಮೂ ಕೆಮ್ಮಿಂಜೆ ಸುಬ್ರಹ್ಮಣ್ಯ ಬಳ್ಳಕ್ಕುರಾಯರವರ ನೇತೃತ್ವದಲ್ಲಿ ಬೆಳಿಗ್ಗೆ ನಾಗತಂಬಿಲ, ಗಣಹೋಮ, ಹರಿಸೇವೆ, ದೈವಂಕುಲು, ಮಹಿಷಂತ್ತಾಯ ಕೊಡಮಣಿತ್ತಾಯ ದೈವಗಳಿಗೆ ಕಲಶಪರ್ವ ನಡೆಯಿತು.
ಮಧ್ಯಾಹ್ನ ನಂತರ ಶಿರಾಡಿ ಪರಿವಾರ ದೈವಗಳಿಗೆ ತಂಬಿಲ ಸೇವೆ ನಡೆದು ರಾತ್ರಿ ಕುಟುಂಬದ ದೈವಗಳ ಭಂಡಾರ ತೆಗೆದು ಬಳಿಕ ಕುಟುಂಬದ ದೈವಗಳ ನೇಮೋತ್ಸವ ನಡೆಯಿತು.

ಈ ಸಂದರ್ಭದಲ್ಲಿ ಪರಾರಿ ಗುತ್ತುವಿನ ಯಜಮಾನ ಜನಾರ್ದನ ರೈ.ಬಿ ಮತ್ತು ಕುಟುಂಬಸ್ಥರು ಆಗಮಿಸಿದ ಭಕ್ತಾಧಿಗಳನ್ನು ಬರ ಮಾಡಿಕೊಂಡರು. ಭಕ್ತಾಧಿಗಳು ದೈವ ದೇವರುಗಳ ಗಂಧ, ಬೂಲ್ಯದಿ ಪ್ರಸಾದ ಸ್ವೀಕರಿಸಿದರು.ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಿತು.