




ಕಡಬ ಟೈಮ್ಸ್, ಕೊಯಿಲ: ಕಡಬ ತಾಲೂಕಿನ ಕೊಯಿಲ ಗ್ರಾಮದ ಗುಲ್ಗೋಡಿಯಲ್ಲಿ ಅಯ್ಯಪ್ಪ ಭಕ್ತವೃಂದ ಆಶ್ರಯದಲ್ಲಿ ಎರಡನೇ ವರ್ಷದ ಅಯ್ಯಪ್ಪ ದೀಪೋತ್ಸವ ಹಾಗೂ ಅಪ್ಪ ಸೇವೆ ಸೋಮವಾರ ರಾತ್ರಿ ನಡೆಯಿತು.
ಬಾಬುಗುರುಸ್ವಾಮಿ ನೇತೃತ್ವದಲ್ಲಿ ಅಯ್ಯಪ್ಪವೃತದಾರಿಗಳಿಗೆ ಅಪ್ಪಸೇವೆ ನಡೆಯಿತು. ಕುದಿಯುವಎಣ್ಣೆಯಿಂದ ಅಪ್ಪತೆಗೆಯುವ ಸೇವೆಯನ್ನು ಸುಮಾರು25 ಕ್ಕೂ ಹೆಚ್ಚು ಮಾಲಾಧಾರಿಗಳು ನೇರವೇರಿಸಿದರು. ಈಸಂದರ್ಭದಲ್ಲಿ ಪುತ್ತೂರು ಚಂದ್ರಶೇಖರ ಹೆಗ್ಡೆ ನಿರ್ದೆಶನದ ಪುನೀತ್ಆರ್ಕೆಸ್ಟ್ರಾ ಅವರಿಂದ ಭಕ್ತಿ ರಸಮಂಜರಿಕಾರ್ಯಕ್ರಮ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆನಡೆಯಿತು.

ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದನಾಗನಂದಿನಿ ಎಂಬ ಯಕ್ಷಗಾನ ಬಯಲಾಟನಡೆಯಿತು. ಈಸಂದರ್ಭದಲ್ಲಿ ಕೃಷ್ಣ ಪೂಜಾರಿ ಗುಲ್ಗೋಡಿ,ಶೇಖರ ಪೂಜಾರಿ ಗುಲ್ಗೋಡಿ, ಲಲಿತಾಗುಲ್ಗೋಡಿ, ಗಂಗಯ್ಯ ಪೂಜಾರಿ ಗುಲ್ಗೋಡಿ, ದೀಕ್ಷಿತ್ಎನ್ ಮತ್ತಿತರು ಉಪಸ್ಥಿತರಿದ್ದರು.