ಕೋಡಿಂಬಾಳ:ಶ್ರಿ ಅಯ್ಯಪ್ಪ ದೀಪೋತ್ಸವ ಮತ್ತು ಧಾರ್ಮಿಕ ಸಭೆ: ಮನಸ್ಸಿನಲ್ಲಿ ಭಕ್ತಿ, ಕೆಲಸದಲ್ಲಿ ಪ್ರೀತಿ ಇದ್ದರೆ ಬದುಕು ಬೆಳಗುತ್ತದೆ- ವೆಂಕಟರಮಣ ರಾವ್ ಮಂಕುಡೆ

ಕೋಡಿಂಬಾಳ:ಶ್ರಿ ಅಯ್ಯಪ್ಪ ದೀಪೋತ್ಸವ ಮತ್ತು ಧಾರ್ಮಿಕ ಸಭೆ: ಮನಸ್ಸಿನಲ್ಲಿ ಭಕ್ತಿ, ಕೆಲಸದಲ್ಲಿ ಪ್ರೀತಿ ಇದ್ದರೆ ಬದುಕು ಬೆಳಗುತ್ತದೆ- ವೆಂಕಟರಮಣ ರಾವ್ ಮಂಕುಡೆ

Kadaba Times News

ಕಡಬ ಟೈಮ್ಸ್,ಕೋಡಿಂಬಾಳ:ಕೋಡಿಂಬಾಳ ಗ್ರಾಮದ ಶ್ರೀ ಅಯ್ಯಪ್ಪ ಮಂದಿರದಲ್ಲಿ ಸಿ.ಎ ರವೀಂದರ್ನ್ ಗುರುಸ್ವಾಮಿ ಗೊಳಿಯಡ್ಕ ಇವರ ನೇತೃತ್ವದಲ್ಲಿ 40ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಮತ್ತು ಧಾರ್ಮಿಕ ಸಭೆಯು ಡಿಸೆಂಬರ್ 28 ಶನಿವಾರದಂದು ನಡೆಯಿತು.

 ಸರಸ್ವತೀ ವಿದ್ಯಾಲಯದ ಸಂಚಾಲಕ ವೆಂಕಟರಮಣ ರಾವ್ ಮಂಕುಡೆ  ಧಾರ್ಮಿಕ ಉಪನ್ಯಾಸ ನೀಡಿ, ಮನೆಯಲ್ಲಿ ಭಜನೆಯ ವಾತಾವರಣ ನಿರ್ಮಿಸಿ ಎಲ್ಲರ ಒಳಿತಿಗಾಗಿ ನಾವು ಪ್ರಾರ್ಥಿಸಬೇಕು. ಮನಸ್ಸಿನಲ್ಲಿ ಭಕ್ತಿ, ಕೆಲಸದಲ್ಲಿ ಪ್ರೀತಿಯನ್ನು ತೋರುತ್ತಾ ಸತ್ಯದ ಹಾದಿಯಲ್ಲಿ ಮುನ್ನಡೆದರೆ ಭಗವಂತನ ಆಶೀರ್ವಾದದಿಂದ ಬದುಕು ಬೆಳಗುತ್ತದೆ ಎಂದರು. ಸಭಾಧ್ಯಕ್ಷತೆ ವಹಿಸಿದ್ದ ನಾಕೂರಿನ ಪ್ರಗತಿಪರ ಕೃಷಿಕ ನಾಗರಾಜ ಕಾರಂತ ಅವರು ಮಾತನಾಡಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಅಭಿವೃದ್ದಿಗೆ ಎಲ್ಲರ ಸಹಕಾರ ಅಗತ್ಯವಾಗಿದ್ದು, ದೀಪೋತ್ಸವದ ಅಚ್ಚುಕಟ್ಟುತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿಅಯ್ಯಪ್ಪ ಭಕ್ತ ಸಮಿತಿ ಅಧ್ಯಕ್ಷ ಬಾಲಕೃಷ್ಣ ಗೌಡ ಗುಂಡಿಮಜಲು, ಗುರುಸ್ವಾಮಿ ಸಿ.ಎ ರವೀಂದ್ರನ್ ಉಪಸ್ಥಿತಿದ್ದರು. ದೀಪೋತ್ಸವ  ಸಮಿತಿ ಅಧ್ಯಕ್ಷ ಕೇಶವ ಗೌಡ ಬೇರಿಕೆ ಸ್ವಾಗತಿಸಿ ಕಾರ್ಯದರ್ಶಿಗಣೇಶ್ ಕೋಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು .ಕಾರ್ಯದರ್ಶಿ ಸುರೇಶ್ ಕೋಡಿಂಬಾಳ ಅವರು ಅಯ್ಯಪ್ಪಮಂದಿರಕ್ಕಾಗಿ ಕೊಡುಗೆ ನೀಡಿದ ದಾನಿಗಳನ್ನು ಗುರುತಿಸಿ ಸ್ಮರಣಿಕೆ ನೀಡಿ ಗೌರವಿಸಿದರು.  ತೃಶ್ವಿ ಪಾಲಪ್ಪೆ ಪ್ರಾರ್ಥನೆ ಮಾಡಿದರೆ,ವಿ.ಕೆ ಕಡಬ ಕಾರ್ಯಕ್ರಮನಿರೂಪಿಸಿದರು.

ಕಾರ್ಯಕ್ರಮಕ್ಕೆ ಮಳೆ ಅಡ್ಡಿ: ಧಾರ್ಮಿಕ ಸಭೆಯಲ್ಲಿ ವೆಂಕಟರಮಣ ರಾವ್ ಮಂಕುಡೆ ಅವರು ಧಾರ್ಮಿಕ ಉಪನ್ಯಾಸ ನೀಡುತ್ತಿದ್ದಂತೆಯೇ ಮಳೆ ಜೋರಾಗಿ ಸುರಿದ ಕಾರಣ ಸುಮಾರು ಇಪ್ಪತ್ತು ನಿಮಿಷದಷ್ಟು ಕಾರ್ಯಕ್ರಮ ಸ್ಥಗಿತಗೊಳಿಸಲಾಗಿತು. ಮಳೆ ಕಡಿಮೆಯಾಗುತ್ತಿದ್ದಂತೆ ಕಾರ್ಯಕ್ರಮ ಮುಂದುವರೆಯಿತು.ಬಳಿಕ ಇದೇ ವೇದಿಕೆಯಲ್ಲಿ ಲಕ್ಷ್ಮಣ ಆಚಾರಿ ಸಂಯೋಜನೆಯಲ್ಲಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿ ಮತ್ತು ಪ್ರಸಿದ್ದ ಕಲಾವಿದರ ಒಗ್ಗೂಡುವಿಕೆಯಲ್ಲಿ ಸತೊದಪ್ಪೆ ಉಳ್ಳಾಲ್ತಿ  ತುಳು ಯಕ್ಶಗಾನ ಬಯಲಾಟ ನಡೆಯಿತು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top