




ಕಡಬ ಟೈಮ್ಸ್, ಸುಬ್ರಹ್ಮಣ್ಯ:ಕಡಬದ ತಾಲೂಕಿನ ಪ್ರಸಿದ್ದಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತುಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀಸುಬ್ರಹ್ಮಣ್ಯ ಮಠಕ್ಕೆ ಉಡುಪಿಯ ಅದಮಾರು ಮಠದಕಿರಿಯ ಯತಿಗಳಾದ ಈಶಪ್ರಿಯ ತೀರ್ಥಶ್ರೀ ಪಾದರು ಸೋಮವಾರ ಭೇಟಿನೀಡಿದರು.
ದೇಗುಲಕ್ಕೆಆಗಮಿಸಿದ ಯತಿಗಳನ್ನು ಸ್ವಾಗತಿಸಿ ಬಳಿಕ ಭವ್ಯ ಮೆರವಣಿಗೆಯಲ್ಲಿದೇಗುಲಕ್ಕೆ ಕರೆದೊಯ್ಯಲಾಯಿತು. ದೇಗುಲದ ಕಾರ್ಯನಿರ್ವಾಹಣಾಧಿಕಾರಿ ರವೀಂದ್ರ ಎಂ.ಎಚ್, ಕಚೇರಿ ಅಧೀಕ್ಷಕಬಾಲಸುಬ್ರಹ್ಮಣ್ಯ ಭಟ್, ಹಾಗೂ ದೇಗುಲದಇತರೆ ಅಧಿಕಾರಿಗಳು ಯತಿಗಳನ್ನು ಸ್ವಾಗತಿಸಿದರು. ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದಬಳಿಕ ಶ್ರೀಗಳು ಸಂಪುಟ ಮಠಕ್ಕೆತೆರಳಿ ಸಂಪುಟ ನರಸಿಂಹ ದೇವರದರ್ಶನ ಪಡೆದರು


ಈಶಪ್ರೀಯಯತಿಗಳು ಅದಮಾರು ಮಠದ ಕಿರಿಯಯತಿಗಳು, ಶ್ರೀ ಸುಬ್ರಹ್ಮಣ್ಯ ಮಠದಯತಿಗಳಾದ ಶ್ರೀ ವಿದ್ಯಾಪ್ರಸನ್ನ ತೀರ್ಥಶ್ರೀ ಪಾದರ ಅಹ್ವಾನದ ಮೇರೆಗೆಶ್ರೀಗಳು ಆಗಮಿಸಿದ್ದಾರೆ. ಸುಬ್ರಹ್ಮಣ್ಯಮಠದ ಯತಿ ವಿದ್ಯಾಪ್ರಸನ್ನ ತೀರ್ಥರುಉಪಸ್ಥಿತರಿದ್ದು ಪರಸ್ಪರ ಕುಶಾಲೋಪಚಾರಿ ಮಾತುಕತೆನಡೆಸಿದರು. ಈ ವೇಳೆ ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಾಧಿಕಾರಿ ಸುದರ್ಶನಜೋಯಿಷ ಮಠದ ಸಿಬಂದಿಗಳು ಉಪಸ್ಥಿತರಿದ್ದರು.