ಬಿಳಿನೆಲೆಯ ದೇವಸ್ಥಾನದ ಮೈದಾನದಲ್ಲಿ ನಿಲ್ಲಿಸಿದ್ದ ಟಿಪ್ಪರ್ ನಿಂದ ಕಳ್ಳತನ

ಬಿಳಿನೆಲೆಯ ದೇವಸ್ಥಾನದ ಮೈದಾನದಲ್ಲಿ ನಿಲ್ಲಿಸಿದ್ದ ಟಿಪ್ಪರ್ ನಿಂದ ಕಳ್ಳತನ

Kadaba Times News

 ಕಡಬ ಟೈಮ್ಸ್ ಬಿಳಿನೆಲೆ: ಹಿಟಾಚಿ ಲೋಡ್ ಮಾಡಿ ನಿಲ್ಲಿಸಲಾಗಿದ್ದ ಟಿಪ್ಪರ್ ಲಾರಿಯ  ಬ್ಯಾಟರಿ, ಟೂಲ್ಸ್ ಸೇರಿದಂತೆ ಹಲವು ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಬಿಳಿನೆಲೆಯಲ್ಲಿ  ಗುರುವಾರ ರಾತ್ರಿ ನಡೆದಿದೆ.



ಬಿಳಿನೆಲೆಯ ಶಿವದೇವ್ ಸಂಸ್ಥೆಗೆ ಸೇರಿದ ಟಿಪ್ಪರ್ ಹಾಗೂ ಹಿಟಾಚಿಯನ್ನು ಬ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮೈದಾನದಲ್ಲಿ ಗುರುವಾರ ರಾತ್ರಿ ನಿಲ್ಲಿಸಲಾಗಿತ್ತು.


ಟಿಪ್ಪರ್ ನಲ್ಲಿದ್ದ ಎರಡು ಬ್ಯಾಟರಿ, ಸುಮಾರು 60 ಲೀಟರ್‌ ಡೀಸೆಲ್, ವಾಹನದ ಲೈಟ್‌ಗಳು, ಜಾಕ್ ಸೇರಿದಂತೆ ಹಲವು ಟೂಲ್ಸ್ ಗಳನ್ನು ಹೊತ್ತೊಯ್ದಿದ್ದಾರೆ ಎಂದು ತಿಳಿದು ಬಂದಿದೆ.ಈ ಬಗ್ಗೆ ಕಡಬ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top