ಕಡಬ: ಅಧ್ಯಕ್ಷ ಪಟ್ಟ ತಪ್ಪಲು ಇವರಿಬ್ಬರು ಕಾರಣರೆಂದು ಸ್ವೀಕರ್ ಮುಂದೆ ಬೊಟ್ಟು ಮಾಡಿ ತೋರಿಸಿ ಆಕ್ರೋಶ ಹೊರಹಾಕಿದ ಮಹೇಶ್ ಕರಿಕ್ಕಳ

ಕಡಬ: ಅಧ್ಯಕ್ಷ ಪಟ್ಟ ತಪ್ಪಲು ಇವರಿಬ್ಬರು ಕಾರಣರೆಂದು ಸ್ವೀಕರ್ ಮುಂದೆ ಬೊಟ್ಟು ಮಾಡಿ ತೋರಿಸಿ ಆಕ್ರೋಶ ಹೊರಹಾಕಿದ ಮಹೇಶ್ ಕರಿಕ್ಕಳ

Kadaba Times News



ಕಡಬ ಟೈಮ್ಸ್(KADABA TIMES): ಕಡಬ ತಾಲೂಕು  ಕುದ್ಮಾರು ಗ್ರಾಮದ ಫೈಝಲ್ ನಗರದಲ್ಲಿ ಜೂ.14 ರಂದು  ಕೂರತ್ ಉರೂಸ್ ಸಭೆಯ ವೇಳೆ  ಸ್ವೀಕರ್ ಯುಟಿ ಖಾದರ್ ಮುಂದೆ  ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ವಿಷಯ  ಪ್ರಸ್ತಾಪಿಸಿ ಸದಸ್ಯರೊಬ್ಬರು  ಆಕ್ರೋಶ ಹೊರ ಹಾಕಿದ ಘಟನೆ ನಡೆದಿದೆ.



ಅಧಿಕಾರ ಜೊತೆ ಪೂರ್ವಭಾವಿ ಸಭೆ ಮುಗಿದ ಬಳಿಕ ಸ್ವೀಕರ್  ಮಾದ್ಯಮಗಳಿಗೆ ಹೇಳಿಕೆ ನೀಡುತ್ತಿದ್ದರು. ಈ ಸಂದರ್ಭ  ಸ್ವೀಕರ್ ಜೊತೆ ಕಡಬದ ಕಾಂಗ್ರೆಸ್ ನಲ್ಲಿ ಮುಂಚೂಣಿಯಲ್ಲಿದ್ದ  ಮುಖಂಡರುಗಳು  ಅವರ ಜೊತೆ  ಕಾಣಿಸಿಕೊಂಡಿದ್ದರು  .ಈ ವೇಳೆ ಹೈಕಾಂಡ್ ಆದೇಶವನ್ನು ದಿಕ್ಕರಿಸಿದ್ದು ಇವರಿಬ್ಬರು ಎಂದು ಬೆರಳು ತೋರಿಸಿ ಮಹೇಶ್ ಕರಿಕ್ಕಳ   ತಮ ಆಕ್ರೋಶ ಹೊರಹಾಕಿದ್ದಾರೆ.  ಇದಕ್ಕೆ ಪ್ರತ್ಯುತ್ತರಿಸಿದ ಸ್ವೀಕರ್ ಅವರು ಇದು ಧಾರ್ಮಿಕ ಸಭೆ ,ಇಲ್ಲಿ ಮಾತನಾಡುವುದು ಸರಿಯಲ್ಲ ಆ ಬಗ್ಗೆ ಮಾತನಾಡುವ ಎಂದು ಸಮಾಧಾನಿಸಿರುವುದು ವೀಡಿಯೋದಲ್ಲಿದೆ. ನಂತರದ ಬೆಳವಣಿಗೆಯಲ್ಲಿ ಪಕ್ಕದ ಕೊಠಡಿಯೊಳಗೆ ಪಕ್ಷದ ಪ್ರಮುಖರು ಸೇರಿಕೊಂಡಿದ್ದು ಅಲ್ಲಿನ ಚರ್ಚೆಯ ಬಗ್ಗೆ ವಿವರ ಲಭ್ಯವಾಗಿಲ್ಲ


ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನು   ಇತ್ತೀಚೆಗೆ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಅಧ್ಯಕ್ಷಗಿರಿಗಾಗಿ ಭಾರೀ  ಪೈಪೋಟಿ ನಡೆದಿತ್ತು. ಅದರಲ್ಲೂ  ಅಧಿಕೃತವಾಗಿ ಪದಗ್ರಹಣ ನಡೆಸಲು ನಿರ್ಧರಿಸಿ ಮಹೇಶ್ ಕುಮಾರ್ ಕರಿಕ್ಕಳರನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರನ್ನಾಗಿ ಆರಿಸಬೇಕೆಂದು ಪಕ್ಷದ ಜಿಲ್ಲಾಧ್ಯಕ್ಷರ ಸಮ್ಮುಖ ನಿರ್ಧಾರ   ಆಗಿತ್ತು. ನಂತರದ ಮಹತ್ವದ ಬೆಳವಣಿಗೆಯಲ್ಲಿ  ಮಹೇಶ್ ಕುಮಾರ್ ವಿರುದ್ಧ ಬಂಡಾಯ ಎದ್ದು  ಹರೀಶ್ ಇಂಜಾಡಿ  ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸ್ಥಾನ ಪಡೆದುಕೊಂಡಿದ್ದರು.


ಮುಂದುವರಿದು ತಡೆಯಾಜ್ಞೆಗೆ ಯಾರಾದರೂ ಕೋರ್ಟಿಗೆ ಹೋಗಬಹುದೆಂಬ ನಿರೀಕ್ಷೆ ಮೊದಲೇ ಇದ್ದುದರಿಂದ ಹರೀಶ್ ಇಂಜಾಡಿ ಮತ್ತವರ ತಂಡ ಕೋರ್ಟ್ ನಲ್ಲಿ   ಕೇವಿಯೆಟ್ ಹಾಕಿತ್ತು. ಈ ನಡುವೆ  ಸುಬ್ರಹ್ಮಣ್ಯದ ಉದ್ಯಮಿಯೊಬ್ಬರು ಕಮಿಟಿಗೆ ತಡೆಯಾಜ್ಞೆ ಕೋರಿ ಹೈಕೋರ್ಟ್ ನಲ್ಲಿ   ದಾವೆ ಹೂಡಿ  ಪ್ರಧಾನವಾಗಿ ಹರೀಶ್ ಇಂಜಾಡಿಯವರ ಬಗ್ಗೆ ದೋಷಾರೋಪ ಮಾಡಿದ್ದರು.



#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top