ಎಡಮಂಗಲ ಗ್ರಾಮ ಪಂಚಾಯತ್ ವ್ಯಾಪ್ತಿ: ಕಸದ ತೊಟ್ಟಿಯಂತಿರುವ ಕರಿಂಬಿಲ ಬಸ್ ನಿಲ್ದಾಣ!

ಎಡಮಂಗಲ ಗ್ರಾಮ ಪಂಚಾಯತ್ ವ್ಯಾಪ್ತಿ: ಕಸದ ತೊಟ್ಟಿಯಂತಿರುವ ಕರಿಂಬಿಲ ಬಸ್ ನಿಲ್ದಾಣ!

Kadaba Times News

 ಕಡಬ ಟೈಮ್ಸ್(KADABA TIMES)  : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಕರಿಂಬಿಲ ಬಸ್ ನಿಲ್ದಾಣ ನಿಂತಿಕಲ್ಲು-ಎಡಮಂಗಲ ಮುಖ್ಯರಸ್ತೆಯ ನಡುವೆ ಇದ್ದು  ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ದಿನನಿತ್ಯ ಈ ಬಸ್ ನಿಲ್ದಾಣವನ್ನು ಉಪಯೋಗಿಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ  ಈ ಬಸ್ ನಿಲ್ದಾಣದ ಪರಿಸ್ಥಿತಿ  ಶೋಚನೀಯ ಸ್ಥಿತಿಯಲ್ಲಿದ್ದು, ಸ್ಥಳೀಯಾಡಳಿತದ  ನಿರ್ಲಕ್ಷ್ಯ  ಎದ್ದು ಕಾಣುತ್ತಿದೆ.ಅಲ್ಲದೆ ಜನರು ಸ್ವಚ್ಚತೆ ಮರೆತಂತಿದೆ.



ಕಸಕಡ್ಡಿಗಳು, ಮರದ ಎಲೆಗಳು, ಧೂಳು ಸಹಿತ ಕೊಳೆತ  ವಾಸನೆ ವಾತಾವರಣ ಈ ಬಸ್ ನಿಲ್ದಾಣದಲ್ಲಿ ಕಾಣುತಿದೆ. ಸಮರ್ಪಕ ನಿರ್ವಹಣೆ ಮಾಡದ ಕಾರಣ  ನಿಲ್ದಾಣದ ಪಕ್ಕದಲ್ಲಿಲ್ಲೇ ಕಸದ ರಾಶಿ ಸ್ಥಳ ಕಸದ ತೊಟ್ಟಿಯಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರಿಗಾಗಿ ನಿರ್ಮಿಸಲಾದ ಈ ಮೂಲಸೌಕರ್ಯ  ಇಂದು ಜನರು ದೂರ ಉಳಿಯುವ ಪರಿಸ್ಥಿತಿಯಲ್ಲಿದೆ.


ಇದೇ ಮಾರ್ಗದಲ್ಲಿ, ಎಡಮಂಗಲ ಗ್ರಾಮ ಪಂಚಾಯಿತಿಯ ಸ್ವಚ್ಚತಾ ಗಾಡಿ "ಒಣ ಕಸ, ಹಸಿ ಕಸ ಬೇರ್ಪಡಿಸಿ ಹಾಕಿ" ಎಂಬ ಘೋಷಣೆಯೊಂದಿಗೆ ಸಂಚರಿಸುತ್ತಿದೆ. ಆದರೆ ನೈಜವಾಗಿ ಈ ಅಭಿಯಾನ ಕಾರ್ಯರೂಪಕ್ಕೆ ಬಂದಿಲ್ಲವೆಂಬುದು ಕರಿಂಬಿಲ ಬಸ್ ನಿಲ್ದಾಣದ ಸ್ಥಿತಿ ಬೊಟ್ಟು ಮಾಡಿ ತೋರಿಸುತ್ತಿದೆ.



ಸ್ವಚ್ಛ ಭಾರತ್ ಅಭಿಯಾನಕ್ಕಾಗಿ ಸರ್ಕಾರ ಸಾವಿರಾರು ಕೋಟಿ ರೂಪಾಯಿ ವೆಚ್ಚಮಾಡುತ್ತಿರುವ ಈ ಸಂದರ್ಭದಲ್ಲಿ, ಗ್ರಾಮೀಣ ಮಟ್ಟದ ಆಡಳಿತ ವ್ಯವಸ್ಥೆಯಾದ ಪಂಚಾಯತ್‌ಗಳ ನಿರ್ಲಕ್ಷ್ಯವೇ ಈ ಅಭಿಯಾನ   ಅನುಷ್ಠಾನವಾಗದಿರಲು ಕಾರಣ ಎಂಬದು ಸಾರ್ವಜನಿಕರ ಆರೋಪವಾಗಿದೆ.



ಬಸ್ ನಿಲ್ದಾಣ ನಿರ್ವಹಣೆಯ ಮುಖ್ಯ ಹೊಣೆಗಾರರಾದ ಸ್ಥಳೀಯಾಡಳಿತದ ಅಧಿಕಾರಿಗಳು ಎಚ್ಚೆತ್ತು  ಶೀಘ್ರದಲ್ಲೇ  ಕ್ರಮ ಕೈಗೊಳ್ಳಬೇಕು , ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ತಕ್ಷಣ ಗಮನಹರಿಸಿ, ಬಸ್ ನಿಲ್ದಾಣದ ತುರ್ತು ಸ್ವಚ್ಛತೆ ಹಾಗೂ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top