




ಕಡಬ ಟೈಮ್ಸ್(KADABA TIMES) : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಕರಿಂಬಿಲ ಬಸ್ ನಿಲ್ದಾಣ ನಿಂತಿಕಲ್ಲು-ಎಡಮಂಗಲ ಮುಖ್ಯರಸ್ತೆಯ ನಡುವೆ ಇದ್ದು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ದಿನನಿತ್ಯ ಈ ಬಸ್ ನಿಲ್ದಾಣವನ್ನು ಉಪಯೋಗಿಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಬಸ್ ನಿಲ್ದಾಣದ ಪರಿಸ್ಥಿತಿ ಶೋಚನೀಯ ಸ್ಥಿತಿಯಲ್ಲಿದ್ದು, ಸ್ಥಳೀಯಾಡಳಿತದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.ಅಲ್ಲದೆ ಜನರು ಸ್ವಚ್ಚತೆ ಮರೆತಂತಿದೆ.
ಕಸಕಡ್ಡಿಗಳು, ಮರದ ಎಲೆಗಳು, ಧೂಳು ಸಹಿತ ಕೊಳೆತ ವಾಸನೆ ವಾತಾವರಣ ಈ ಬಸ್ ನಿಲ್ದಾಣದಲ್ಲಿ ಕಾಣುತಿದೆ. ಸಮರ್ಪಕ
ನಿರ್ವಹಣೆ ಮಾಡದ ಕಾರಣ ನಿಲ್ದಾಣದ ಪಕ್ಕದಲ್ಲಿಲ್ಲೇ
ಕಸದ ರಾಶಿ ಸ್ಥಳ ಕಸದ ತೊಟ್ಟಿಯಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರಿಗಾಗಿ ನಿರ್ಮಿಸಲಾದ ಈ ಮೂಲಸೌಕರ್ಯ
ಇಂದು ಜನರು ದೂರ ಉಳಿಯುವ ಪರಿಸ್ಥಿತಿಯಲ್ಲಿದೆ.
ಇದೇ
ಮಾರ್ಗದಲ್ಲಿ, ಎಡಮಂಗಲ ಗ್ರಾಮ ಪಂಚಾಯಿತಿಯ ಸ್ವಚ್ಚತಾ ಗಾಡಿ "ಒಣ ಕಸ, ಹಸಿ ಕಸ ಬೇರ್ಪಡಿಸಿ ಹಾಕಿ"
ಎಂಬ ಘೋಷಣೆಯೊಂದಿಗೆ ಸಂಚರಿಸುತ್ತಿದೆ. ಆದರೆ ನೈಜವಾಗಿ ಈ ಅಭಿಯಾನ ಕಾರ್ಯರೂಪಕ್ಕೆ ಬಂದಿಲ್ಲವೆಂಬುದು
ಕರಿಂಬಿಲ ಬಸ್ ನಿಲ್ದಾಣದ ಸ್ಥಿತಿ ಬೊಟ್ಟು ಮಾಡಿ ತೋರಿಸುತ್ತಿದೆ.
ಸ್ವಚ್ಛ
ಭಾರತ್ ಅಭಿಯಾನಕ್ಕಾಗಿ ಸರ್ಕಾರ ಸಾವಿರಾರು ಕೋಟಿ ರೂಪಾಯಿ ವೆಚ್ಚಮಾಡುತ್ತಿರುವ ಈ ಸಂದರ್ಭದಲ್ಲಿ, ಗ್ರಾಮೀಣ
ಮಟ್ಟದ ಆಡಳಿತ ವ್ಯವಸ್ಥೆಯಾದ ಪಂಚಾಯತ್ಗಳ ನಿರ್ಲಕ್ಷ್ಯವೇ ಈ ಅಭಿಯಾನ ಅನುಷ್ಠಾನವಾಗದಿರಲು
ಕಾರಣ ಎಂಬದು ಸಾರ್ವಜನಿಕರ ಆರೋಪವಾಗಿದೆ.
ಬಸ್
ನಿಲ್ದಾಣ ನಿರ್ವಹಣೆಯ ಮುಖ್ಯ ಹೊಣೆಗಾರರಾದ ಸ್ಥಳೀಯಾಡಳಿತದ ಅಧಿಕಾರಿಗಳು ಎಚ್ಚೆತ್ತು ಶೀಘ್ರದಲ್ಲೇ
ಕ್ರಮ ಕೈಗೊಳ್ಳಬೇಕು , ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ತಕ್ಷಣ ಗಮನಹರಿಸಿ, ಬಸ್ ನಿಲ್ದಾಣದ
ತುರ್ತು ಸ್ವಚ್ಛತೆ ಹಾಗೂ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ