






ಕಡಬ ಟೈಮ್ಸ್, ಪಟ್ಟಣ ಸುದ್ದಿ: ಕಡಬ ತಾಲೂಕು ಐತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ತಮಿಳು ನಿರಾಶ್ರಿತರಿಗೆ ನಿವೇಶನ ದೊರಕಿಸಿ ಕೊಟ್ಟವರನ್ನು ನಿರಾಶ್ರಿತರು ಸೇರಿಕೊಂಡು ಸನ್ಮಾನಿಸಿದ್ದಾರೆ.
ಕಡಬ ತಾಲೂಕು ತಹಶೀಲ್ದಾರ್ ಪ್ರಭಾಕರ ಖಜೂರೆ, ಕಡಬ ತಾಲೂಕು
ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ , ದಲಿತ ಸಂಘರ್ಷ ಸಮಿತಿಯ( ಅಂಬೇಡ್ಕರ್ ವಾದ) ಸಂಚಾಲಕ ವಸಂತ
ಕುಬಲಾಡಿ ಅವರನ್ನು ಕಡಬ ತಾಲೂಕು ಸೌಧದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾಲನಿ ನಿವಾಸಿಗಳಾದ ಹನುಮಂತ, ಕುಮಾರನ್, ವಿಜಯ, ವರದರಾಜ್, ಜಯ ಕುಮಾರ್, ಶಿವಜ್ಞಾನ
ಸೆಲ್ವಂ, ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.