




ಕಡಬ ಟೈಮ್ಸ್ ( Kadaba times): ವಿಚಾರಣೆ ನೆಪದಲ್ಲಿ ಹಿಂದೂ ಕಾರ್ಯಕರ್ತರ ಮನೆಗೆ ರಾತ್ರಿ ವೇಳೆ ಬರುವುದನ್ನು ಖಂಡಿಸಿ ಹಿಂದೂಪರ ಸಂಘಟನೆ ಮತ್ತು ಬಿಜೆಪಿ ಜಂಟಿಯಾಗಿ ಜೂನ್ 4 ರ ಸಂಜೆ ಕಡಬ ಠಾಣಾ ಮುಂಭಾಗ ದಿಢೀರ್ ಪ್ರತಿಭಟನೆ ನಡೆಸಿದೆ.
ಆರಂಭದಲ್ಲಿ ಮಾತನಾಡಿದ ಹಿಂದೂ ಮುಖಂಡ ಮುರಳಿ ಕೃಷ್ಣ ಅಸಂತಡ್ಕ ಅವರು, ಪೊಲೀಸರ ಕ್ರಮಕ್ಕೆ ನಮ್ಮದೇನು ತಕರಾರು ಇಲ್ಲ ಆದರೆ, ಕಾರ್ಯಕರ್ತರ ಮನೆಗೆ ರಾತ್ರಿ ಬರುವ ಬದಲು ಹಗಲು ಹೊತ್ತಲ್ಲಿ ಬನ್ನಿ ಎಂದು ಠಾಣೆಗೆ ಬಂದರೆ ಅವರ ಮೇಲೆ ಕೇಸು ಮಾಡುತ್ತೀರಿ,ರೌಡಿ ಕಳ್ಳರ ಮೆನೆಗೆ ಹೋಗಬೇಕಿತ್ತು, ಆದರೆ ಹಿಂದೂ ಕಾರ್ಯಕರ್ತರ ಮನೆಗೆ ಬರುತ್ತಿದ್ದಾರೆ .ಇದೇ ರೀತಿ ಮುಂದು ವರಿದರೆ ತಾಯಂದಿರನ್ನು ಸೇರಿಸಿ ಆಹೋರಾತ್ರಿ ಹೋರಾಟ ಮಾಡಲಾಗುವುದು ಎಂದು ಸರ್ಕಾರ ಮತ್ತು ಇಲಾಖೆಗೆ ಎಚ್ಚರಿಕೆ ನೀಡಿದರು.
ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ ,ನಮಗೆ ಪೊಲೀಸ್ ಇಲಾಖೆಯ ಬಗ್ಗೆ ಗೌರವ ಇದೆ. ಸರ್ಕಾರ ತುಷ್ಟಿಕರಣ ನೀತಿಯನ್ನು ಕೈಬಿಡಬೇಕು, ಕಾರ್ಯಕರ್ತರನ್ನು ಬಲಿ ಪಶು ಆಗಲು ಬಿಡುವುದಿಲ್ಲ , ಮುಂದೆ ಪುನರಾವರ್ತನೆಯಾದರೆ ಹೋರಾಟ ಅನಿವಾರ್ಯ ಎಂದರು.
ಬಿಜೆಪಿಯ ಮತ್ತೋರ್ವ ಮುಖಂಡೆ ಪುಲಸ್ತ್ಯ ರೈ ಮಾತಾನಾಡಿ, ಸಮಾಜದ ರಕ್ಷಣೆ ಬಿಟ್ಟು ಹಿಂಸೆ ಕೊಡುವ ಅಧಿಕಾರ ಕೊಟ್ಟವರು ಯಾರು?, ಇನ್ನು ಯಾರ ಮನೆಯಲ್ಲೂ ಜಿಪಿಯಸ್ ಪೋಟೊ ತೆಗೆಯಬಾರದು, ಇದೇ ರೀತಿ ಮುಂದುವರಿದರೆ ಎಲ್ಲಾಮಾತೆಯರು ದುರ್ಗೆಯಾಗಬೇಕಾದಿತು ಎಂದರು.
ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಮಾತನಾಡಿ, ಯಾರೆಲ್ಲ ಸ್ಟೇಷನ್ ಗೆ ಬರ್ತಿರೋ ಅವರ ಮೇಲೆ ಕೇಸು ಮಾಡುವುದಾಗಿ ಎಸ್ಪಿ ಹೇಳಿಕೆ ಕೊಟ್ಟಿದ್ದಾರೆ. ಹಾಗಾದರೆ ನೀವು ಅಪರಾಧ ಮುಕ್ತ ಜಿಲ್ಲೆ ಮಾಡುವಿರೋ, ಅಪರಾಧಿಗಳು ಜಾಸ್ತಿ ಆಗುವ ಜಿಲ್ಲೆಮಾಡುವಿರೋ? ಎಂದು ಪ್ರಶ್ನಿಸಿದರಲ್ಲದೆ ಕಾರ್ಯಕರ್ತರು ಏನು ಮಾಡುತ್ತಾರೆ ಎಂದು ರಾತ್ರಿ ಬಂದರೆ ಎರಡು ಗಂಟೆಗೆ ಬಂದರೆ ಗೊತ್ತಾಗುವುದಿಲ್ಲ, ಎಸ್ಪಿಯವರಲ್ಲಿ ಕೇಳಿ ಕೊಳ್ಳುತ್ತಿದ್ದೇನೆ ನಿಮ್ಮ ಯುನಿಫಾಮ್ ಕಳಜಿ ಬೆಳಿಗ್ಗೆ ಆರು ಗಂಟೆಗೆ ನಡೆಯುವ ಶಾಖೆಗೆ ಹೋಗಿ ಸ್ವಯಂ ಸೇವಕರು ಏನು ಮಾಡ್ತರೆ ಅಂತ ಗೊತ್ತಾಗುತ್ತೆ. ಬಕ್ರಿದ್ ತನಕ ಎಲ್ಲರ ಮನೆಗೆ ಹೋಗ್ತರಂತೆ. ಹಿಂದೂ ಕಾರ್ಯಕರ್ತರ ಮನೆಗೆ ಹೋದರೆ ಸಾಧ್ಯ ಆಗಲಿಕ್ಕೆ ಇಲ್ಲ, ಗೊ ಹಂತಕರ ಮನೆಗೆ ಹೋಗಿ.ಆ ತಾಕತ್ತು ನಿಮಗೆ ಇಲ್ಲ , ಮೀಟರ್ ಇಲ್ಲ, ಅವರ ಹೆಂಗಸರು ತಲ್ವಾರ್ ಇಡಿತಾರೆ, ಕಲ್ಲು ಹಿಡಿತಾರೆ ಅದಕ್ಕೆ ಹೆದರಿ ಹಿಂದೂ ಕಾರ್ಯಕರ್ತ ರ ಮನೆಗೆ ಬರ್ತಾ ಇದ್ದೀರಿ,ತಾಕತ್ತು ಇದ್ದರೆ ಅವರ ಮನೆಗೆ ಹೋಗಿ ಅಂತಹ ತಾಕತ್ತು ಇಲ್ಲದ ಎಸ್ಪಿಯವರು ಯಾವ ಶಾಂತಿಯನ್ನು ಸ್ಥಾಪಿಸಲು ಹೊರಟ್ರಿದ್ರಿ? .ನಮಗೆ ಯಾವ ಹೆದರಿಕೆಯೂ ಇಲ್ಲ ಕೇಸು ಸಾವಿರವಾಗಲಿ. ನಾವೆಲ್ಲರೂ ಸಮಾಜದ ಕಾರ್ಯ ಮಾಡ್ತೆವೆ ಎಂದರು.
ಪ್ರತಿಭಟನೆಯಲ್ಲಿ ಹಿಂದೂ ಮುಖಂಡರಾದ ಮೋಹನ್ ದೋಳ್ಪಾಡಿ, ಶ್ರೀಧರ ತೆಂಕಿಲ, ರಾಧಾಕೃಷ್ಣ ಕೋಲ್ಪೆ, ಅಶ್ವಿತ್ ಕಂಡಿಗ, ಪ್ರಮೋದ್ ರೈ ನಂದುಗುರಿ, ವಾಸುದೇವ ಭಟ್ ಕಡ್ಯ, ವಾಸುದೇವ ಕೊಲ್ಲೆಸಾಗು, ಉಮೇಶ್ ಶೆಟ್ಟಿ ಸಾಯಿರಾಮ್, ಮೋಹನ್ ಕೆರೆಕ್ಕೋಡಿ, ವೀಣಾ ರಮೇಶ್, ರಘುರಾಮ ನಾಯ್ಕ್, ಕಿಶೋರ್ ಶಿರಾಡಿ, ಹೇಮಲತಾ ಕೇಪುಂಜ, ಪ್ರಮೀಳಾ ಲೋಕೇಶ್, ಬಿಜೆಪಿ ಮುಖಂಡರಾದ ಆಶಾ ತಿಮ್ಮಪ್ಪ ಗೌಡ, ಶ್ರೀ ಕೃಷ್ಣ ಎಂ.ಆರ್., ಪ್ರದೀಪ್ ರೈ ಮನವಳಿಕೆ, ಸುರೇಶ್ ದೇಂತಾರು, ಲಕ್ಷೀ ನಾರಾಯಣ ರಾವ್, ಪ್ರಕಾಶ್ ಎನ್.ಕೆ. ಪ್ರಕಾಶ್ ಕೆಮ್ಮಾರ, ರಾಮಣ್ಣ ಗೌಡ ಜಾಲ್ತಾರು, ಶಶಾಂಕ್ ಗೋಖಲೆ, ಮತ್ತಿತರರು ಭಾಗವಹಿಸಿದ್ದರು. ವಿಶಾಕ್ ಪುತ್ತೂರು ಸೇರಿದಂತೆ ಪ್ರತಿಭಟನೆಯಲ್ಲಿ ಹಲವಾರು ಹಿಂದೂ ಪರ ಸಂಘಟನೆಯ ಪ್ರಮುಖರು,ಕಾರ್ಯಕರ್ತರು ಪಾಲ್ಗೊಂಡಿದ್ದರು.ಮಹಿಳೆಯರು ಠಾಣಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.