




ಕಡಬ ಟೈಮ್ಸ್ (KADABA TIMES): ಬಕ್ರೀದ್ ಹಬ್ಬದ ಹಿನ್ನೆಲೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಡಬ ಪೋಲಿಸ್ ಠಾಣಾ ವತಿಯಿಂದ ಗರುವಾರ ಸಂಜೆ(ಜೂ.5 ರಂದು)ಸರ್ವ ಧರ್ಮ ಧಾರ್ಮಿಕ ಮುಖಂಡರುಗಳ ಶಾಂತಿಸಭೆ ನಡೆಯಿತು.
ಕಡಬ ಪೋಲಿಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಅಭಿನಂದನ್ ರವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಶಾಂತಿಯುತವಾಗಿ ಹಬ್ಬವನ್ನು ಆಚರಿಸಿ,.ಹಬ್ಬದ ಸಂದರ್ಭದಲ್ಲಿ ಯಾವುದಾದರೂ ಅಹಿತಕರ ಘಟನೆ ತಕ್ಷಣ ಠಾಣೆಗೆ ಮಾಹಿತಿ ನೀಡಿ ಸಹಕರಿಸಿ ಎಂದರು.
ಸಭೆಯಲ್ಲಿ ಕಡ ಠಾಣಾ ವ್ಯಾಪ್ತಿಗೆ ಒಳಪಟ್ಟ ಮಸೀದಿಯ ಪ್ರಮುಖರು, ಕ್ರೈಸ್ತ ಸಮುದಾಯದ ಪ್ರಮುಖರು, ದಲಿತ ಸಂಘಟನೆಗಳ ಮುಂದಾಳುಗಳು, ಕೆಲ ಹಿಂದೂ ಧರ್ಮದ ಪ್ರಮುಖರು ಉಪಸ್ಥಿತರು.ಹಿಂದೂ ಧಾರ್ಮಿಕ ಮುಖಂಡರು ಸಭೆಗೆ ಹಾಜರಾಗಿಲ್ಲ ಎಂದು ತಿಳಿದು ಬಂದಿದೆ.