




ಕಡಬ ಟೈಮ್ಸ್ ( KADABA TIMES): ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪೊಲೀಸ್ ಠಾಣೆಗೆ ನೂತನ ಹೆಡ್ ಕಾನ್ಸ್ಟೇಬಲ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
![]() |
ಪಳನಿ ವೇಲು ಕೆಎಂ (KADABA TIMES) |
ಪಳನಿ ವೇಲು ಕೆಎಂ ರವರು ಬೆಳ್ತಂಗಡಿ
ಪೊಲೀಸ್ ಠಾಣೆಯಿಂದ ಸುಳ್ಯಕ್ಕೆ ವರ್ಗಾವಣೆಗೊಂಡಿರುತ್ತಾರೆ ಮೂಲತ: ದುಗಲಡ್ಕ
ನಿವಾಸಿ ದಿವಂಗತ ಮುತ್ತು ಸ್ವಾಮಿ ಹಾಗೂ ದಿವಂಗತ ಧನ್ಯ ಭಾಗ್ಯಂ ರವರ ಪುತ್ರರಾಗಿದ್ದಾರೆ.
ಕಳೆದ 29 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಇವರು ಕೋಣಾಜೆ ಪೊಲೀಸ್ ಠಾಣೆಯಲ್ಲಿ ಹೈವೇ ಸ್ಕ್ವಾಡ್,ಬಂಟ್ವಾಳ ನಗರ ಠಾಣೆ, ಸುಬ್ರಹ್ಮಣ್ಯ ಪುತ್ತೂರು ಟ್ರಾಫಿಕ್, ಡಿಸಿಐಬಿ ಮಂಗಳೂರು ಸಿಇಎನ್ ಮಂಗಳೂರು ಹೀಗೆ ಇಲಾಖೆಯಲ್ಲಿ ಬೇರೆ ಬೇರೆ ಹುದ್ದೆಗಳನ್ನು ನಿಭಾಯಿಸಿದ್ದಾರೆ.