ತನ್ನ ಆರು ತಿಂಗಳ ಪುತ್ರಿ ಅಸೌಖ್ಯದಿಂದ ಸಾವನ್ನಪ್ಪಿದ ಐದೇ ದಿನದಲ್ಲಿ ಆತ್ಯಹತ್ಯೆಗೆ ಶರಣಾದ ತಂದೆ

ತನ್ನ ಆರು ತಿಂಗಳ ಪುತ್ರಿ ಅಸೌಖ್ಯದಿಂದ ಸಾವನ್ನಪ್ಪಿದ ಐದೇ ದಿನದಲ್ಲಿ ಆತ್ಯಹತ್ಯೆಗೆ ಶರಣಾದ ತಂದೆ

Kadaba Times News

 ಕಡಬ ಟೈಮ್ಸ್(KADABA TIMES):ಇಲ್ಲಿನ ಬೆಳ್ಳಾರೆ ಠಾಣಾ ವ್ಯಾಪ್ತಿಯ ಬಾಳಿಲದಲ್ಲಿ ಮಗುಮೃತಪಟ್ಟ ಐದೇ ದಿನದಲ್ಲಿ ತಂದೆಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.



ಬಾಳಿಲ ಬೊಮ್ಮಣ ಮಜಲು ಎಂಬಲ್ಲಿನ ನಿವಾಸಿ ಬಾಲಕೃಷ್ಣ (38 ವ) ಎಂಬವರು ಆತ್ಮಹತ್ಯೆ ಮಾಡಿಕೊಂಡವರು.    ಆರು ತಿಂಗಳ ಪುತ್ರಿ ಐದು ದಿನಗಳ ಹಿಂದೆ  ಅನಾರೋಗ್ಯಕ್ಕೆ ಒಳಗಾಗಿ  ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿತ್ತು.  


ಮಗು ನಿಧನವಾದ ಹಿನ್ನೆಲೆ ಮಾನಸಿಕವಾಗಿ ಜರ್ಜರಿತಗೊಂಡಿದ್ದರು ಎನ್ನಲಾಗಿದೆ .ಮೇ28 ರಂದು ರಾತ್ರಿ ಮನೆ ಬಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ  ವರದಿಯಾಗಿದೆ.


ಮರು ದಿನ ಮುಂಜಾನೆ ಮನೆಯವರ ಗಮನಕ್ಕೆ ಬಂದಿದೆ. ಮೃತರು ತಂದೆ , ತಾಯಿ , ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ  .


ನಮ್ಮ ಸುದ್ದಿಗಳ  ಲಿಂಕ್ ಗಳನ್ನು ವಾಟ್ಸಪ್ ್ ನಲ್ಲಿ ಪಡೆಯಿರಿ.ಅಥವಾ ಕಡಬ ಟೈಮ್ಸ್ Facebook ಪೇಜ್ ನಲ್ಲಿ ಓದಿರಿ


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top