




ಕಡಬ ಟೈಮ್ಸ್, ಕ್ರೈಮ್ ಸುದ್ದಿ: ಯಾವುದೊ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ ಕೋಡಿಂಬಾಳ ಗ್ರಾಮದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದ್ದು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಡಿಂಬಾಳ ಗ್ರಾಮದ ಮೂರಾಜೆ ಕೊಪ್ಪ ಚಂದಪ್ಪ ಕುಂಬಾರ(72 ವ) ಮೃತಪಟ್ಟವರು. ಮೃತರ ತಮ್ಮನ ಪತ್ನಿ ಕೆಲಸದ ನಿಮಿತ್ತ ಮೇ13 ರಂದು ತೋಟಕ್ಕೆ ಹೋಗುವಾಗ ಚಂದಪ್ಪ ಅವರು ಮನೆಯ ಹೊರಗಿನ ಕೊಟ್ಟಿಗೆಯ ಬಳಿ ಬಿದ್ದು ಹೊರಳಾಡುತ್ತಿದ್ದದನ್ನು ಕಂಡು ವಿಚಾರಿಸಿದಾಗ ವಿಷಸೇವನೆ ಮಾಡಿರುವುದಾಗಿ ತಿಳಿಸಿದ ಹಿನ್ನೆಲೆ ಅವರ ಮಗ ಜಯರಾಮ ಅವರಿಗೆ ತಿಳಿಸಿದ್ದರು.ಕೂಡಲೇ ಕಡಬದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆಯಲ್ಲಿರುವ ಸಮಯ ಮೇ.15 ರಂದು ಬೆಳಿಗ್ಗೆ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿರುತ್ತಾರೆ. ಈ ಬಗ್ಗೆ ಮೃತರ ಅಣ್ಣ ಬಾಳಪ್ಪ ಕುಂಬಾರ ಅವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣಾ ಯು ಡಿ ಆರ್ ನಂಬ್ರ 11/2025 ಕಲಂ:194 BNSS-2023ಯಂತೆ ಪ್ರಕರಣ ದಾಖಲಾಗಿರುತ್ತದೆ.
ಚಂದಪ್ಪ ಕುಂಬಾರ ರವರ ಪತ್ನಿ ಹೊನ್ನಮ್ಮ ರವರು ಸುಮಾರು 12 ವರ್ಷಗಳ ಹಿಂದೆ ತೀರಿಕೊಂಡಿದ್ದರು. ಬಳಿಕ ಅವರ ಮಗಳು ಆಶಾಲತಾ ಎಂಬುವರು ಸುಮಾರು 1 ವರ್ಷಗಳ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದರು. ಪತ್ನಿ ಹಾಗೂ ಮಕ್ಕಳು ತೀರಿಕೊಂಡ ಮೇಲೆ ಮಾನಸಿಕವಾಗಿ ಕುಗ್ಗಿ ಬೇಸರದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಹೀಗಾಗಿ ಸಂಬಂಧಿಕರ ಬಳಿ ಹೇಳಿಕೊಂಡು ಬೇಸರ ಮಾಡಿಕೊಂಡಿದ್ದ ಕಾರಣ ಹಲವು ಬಾರಿ ಸಮಾಧಾನ ಮಾಡಿದ್ದರು ಎನ್ನಲಾಗಿದೆ.