ಕಡಬ: 32 ವರ್ಷದಿಂದ ನಿವೇಶನಕ್ಕೆ ಅಲೆದಾಟ :ಐತ್ತೂರಿನ 7 ಕುಟುಂಬಕ್ಕೆ ಕೊನೆಗೂ ಜಾಗ ಮಂಜೂರು

ಕಡಬ: 32 ವರ್ಷದಿಂದ ನಿವೇಶನಕ್ಕೆ ಅಲೆದಾಟ :ಐತ್ತೂರಿನ 7 ಕುಟುಂಬಕ್ಕೆ ಕೊನೆಗೂ ಜಾಗ ಮಂಜೂರು

Kadaba Times News

 ಕಡಬ ಟೈಮ್ಸ್, ಪ್ರಮುಖ ಸುದ್ದಿ :  ಇಲ್ಲಿನ ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ   ಐತ್ತೂರು ಗ್ರಾಮದ ಸುಮಾರು 25 ಕುಟುಂಬಗಳಿಗೆ ಹಕ್ಕು ಪತ್ರ ಕೊಟ್ಟು ಬರೋಬ್ಬರಿ 32 ವರ್ಷ ಆದರೂ  ಯಾರಿಗೂ ನಿವೇಶನ ಹಂಚಿಕೆ ಮಾಡಿರಲಿಲ್ಲ. ಇದೀಗ 25 ಮಂದಿಯ ಪೈಕಿ 7 ಮಂದಿಗೆ ಶಾಸಕ ಅಶೋಕ್ ಕುಮಾರ್ ರೈ ಅವರು ನಿವೇಶನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.



ಐತ್ತೂರು ಗ್ರಾ.ಪಂ.ಸದಸ್ಯ ಈರೇಶ್ ಗೌಡ, ಹನುಮಂತ್,  ವರದರಾಜ್, ತ್ಯಾಗಮೂರ್ತಿ, ಪಾರ್ಥಿವನ್, ಜಯಕುಮಾರ್, ಕುಮಾರ್ ಕೆ, ರವಿ ಎಂಬವರು ನಿವೇಶನ ಪಡೆದುಕೊಂಡ ಫಲಾನುಭವಿಗಳು   ನಿವೇಶನ ಕೊಡಿಸಿದ ಶಾಸಕರನ್ನು ಮೇ.19ರಂದು ಕಚೇರಿಯಲ್ಲಿ ಭೇಟಿಯಾದ ಫಲಾನುಭವಿಗಳು ಆನಂದ ಭಾಷ್ಪದ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.    


ಮಾಜಿ ಶಾಸಕ ವಿನಯ ಕುಮಾರ್ ಸೊರಕೆಯವರು  1993ರಲ್ಲಿ ಶ್ರೀಲಂಕಾ ನಿರಾಶ್ರಿತರಾದ 25 ಮಂದಿಗೆ ಐತ್ತೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ತಲಾ 3 ಸೆಂಟ್ಸ್ ಮನೆ ನಿವೇಶನದ ಹಕ್ಕು ಪತ್ರ ನೀಡಿದ್ದರು. ಆದರೆ ತನಕವೂ ಅಧಿಕಾರಿಗಳು ಫಲಾನುಭವಿಗಳಿಗೆ ನಿವೇಶನದ ಜಾಗ ತೋರಿಸಿಲ್ಲ. ವಿಚಾರವನ್ನು ಫಲಾನುಭವಿಗಳು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಗಮನಕ್ಕೆ ತಂದಿದ್ದರು. ಶಾಸಕರ ಒಂದೇ ಒಂದು ಫೋನ್ ಕರೆಗೆ ಎಚ್ಚರಗೊಂಡ ಅಧಿಕಾರಿಗಳು 25 ಮಂದಿ ಫಲಾನುಭವಿಗಳ ಪೈಕಿ ಏಳು ಮಂದಿಗೆ ಮೊದಲ ಹಂತದಲ್ಲಿ ನಿವೇಶನ ಹಂಚಿಕೆ ಮಾಡಿದ್ದಾರೆ.


ಹಕ್ಕುಪತ್ರ ಪಡೆದುಕೊಂಡ ಫಲಾನುಭವಿ ಮೃತಪಟ್ಟಿದ್ದಲ್ಲಿ ಅವರ ವಾರಿಸುದಾರರಿಗೆ ನಿವೇಶನ ನೀಡುವ ನಿರ್ಧಾರ ಕೈಗೊಂಡಿದ್ದಾರೆ. ಒಟ್ಟಿನಲ್ಲಿ ಹಕ್ಕು ಪತ್ರ ಕೈಗೆ ಸಿಕ್ಕಿದರೂ ನಿವೇಶನ ಸಿಗದ ಫಲಾನುಭವಿಗಳಿಗೆ ನಿವೇಶನ ಕೊಡಿಸಲು ಕೊನೆಗೂ ಶಾಸಕ ಅಶೋಕ್ ಕುಮಾರ್ ರೈ ಅವರೇ ಬರಬೇಕಾಗಿ ಬಂದಿರುವುದು ವಿಪರ್ಯಾಸವಾಗಿದೆ.


ಕಳೆದ 32 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದು ಪುತ್ತೂರು ಶಾಸಕರ ಮೂಲಕ ನ್ಯಾಯ ಸಿಕ್ಕಿದೆ. ಬಡವರಿಗೆ ಸ್ಪಂದನೆ ನೀಡುವ ಶಾಸಕರ ಮನೋಸ್ಥಿತಿ ಕಂಡು ಗ್ರಾಮಸ್ಥರೇ  ಅಚ್ಚರಿಗೊಂಡಿದ್ದಾರೆ.   


 ಬಡವರಿಗೆ ಸವಲತ್ತು ಮನೆಗೆ ತಲುಪಿಸುವ ಕೆಲಸ  ಹಕ್ಕು ಪತ್ರ ನೀಡಿದರೂ  ನಿವೇಶನ ನೀಡಿಲ್ಲ ಎಂದು ಐತ್ತೂರು ಗ್ರಾಮದ 25 ಕುಟುಂಬಸ್ಥರು ನನ್ನ ಬಳಿ ಬಂದಿದ್ದರು.  ವಿನಯಕುಮಾರ್ ಸೊರಕೆ ಅವರು ಶಾಸಕರಾಗಿದ್ದ ವೇಳೆ ಬಡವರಿಗೆ ಸಹಾಯವಾಗಲೆಂದು ಹಕ್ಕು ಪತ್ರ ನೀಡಿದ್ದರು.  ಹಕ್ಕು ಪತ್ರ ನೀಡಿದ ಬಳಿಕ ನಿವೇಶನ ಹಂಚಿಕೆ ಮಾಡುವ ಕೆಲಸವನ್ನು ಇಲಾಖಾ ಅಧಿಕಾರಿಗಳು ಮಾಡಬೇಕಿತ್ತು. ಯಾಕೆ ರೀತಿ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ನನ್ನ ಗಮನಕ್ಕೆ ವಿಚಾರ ಬಂದ ಕೂಡಲೇ ಸ್ಪಂದಿಸಿದ್ದೇನೆ. ಪ್ರಥಮ ಹಂತದಲ್ಲಿ 7 ಕುಟುಂಬಗಳಿಗೆ ನಿವೇಶನ ನೀಡಲಾಗಿದೆ. ಹಕ್ಕು ಪತ್ರ ದೊರೆತವರ ಪೈಕಿ ಕೆಲವು ಫಲಾನುಭವಿಗಳು ಮರಣ ಹೊಂದಿದ್ದಾರೆ. ಹಕ್ಕು ಪತ್ರ ಪಡೆದ ಎಲ್ಲರಿಗೂ ನಿವೇಶನ ನೀಡುವಂತೆ ಸೂಚನೆಯನ್ನು ನೀಡಿದ್ದೇನೆ. ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಹಾಗೂ ಐತ್ತೂರು ಗ್ರಾ.ಪಂ ಸದಸ್ಯ ಈರೇಶ್ರವರು ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ- ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top