ಕಡಬದ ಕೊಯಿಲದಲ್ಲಿ ಧರೆ ಕುಸಿತ: ಅಪಾಯದಲ್ಲಿ ಕುಡಿಯುವ ನೀರಿನ ಟ್ಯಾಂಕ್

ಕಡಬದ ಕೊಯಿಲದಲ್ಲಿ ಧರೆ ಕುಸಿತ: ಅಪಾಯದಲ್ಲಿ ಕುಡಿಯುವ ನೀರಿನ ಟ್ಯಾಂಕ್

Kadaba Times News

ಕಡಬ ಟೈಮ್ಸ್ (KADABA TIMES):  ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ  ಪ್ರಕೃತಿ ವಿಕೋಪ ಉಂಟಾಗಿದೆ. ಶುಕ್ರವಾರ ರಾತ್ರಿ ಸುರಿದ ಮಳೆಗೆ   ಕಡಬ ತಾಲೂಕಿನ ಕೊಯಿಲ ಗ್ರಾ.ಪಂ ಬಳಿ ಗುಡ್ಡ ಕುಸಿತ ಉಂಟಾಗಿದೆ.



ಇದರ ಪರಿಣಾಮ ಗ್ರಾ.ಪಂ ಕುಡಿಯುವ ನೀರಿನ ಟ್ಯಾಂಕ್  ಅಪಾಯದಲ್ಲಿರುವುದಾಗಿ ಮಾಹಿತಿ ಲಭಿಸಿದೆ .  ಸ್ಥಳೀಯರು ಮಾರ್ಗ ಮಾಡುವ  ಉದ್ದೇಶದಿಂದ ಈ ಹಿಂದೆ   ಇಲ್ಲಿ ಮಣ್ಣು ತೆಗೆದಿಯಲಾಗಿತ್ತು. ಇದೇ ಕಾರಣದಿಂದ   ಕುಸಿತ ಉಂಟಾಗಿರಬಹುದೆಂದು ಊಹಿಸಲಾಗಿದೆ.  



ಈ ಗುಡ್ಡ ಕುಸಿತದಿಂದ  ಮನೆಯೊಂದಕ್ಕೆ  ಅಪಾಯ ಉಂಟಾಗಿದ್ದು ಜನರು ಆತಂಕಪಡುತ್ತಿದ್ದಾರೆ .  ಮನೆಯ ಸಾಮಾಗ್ರಿಗಳನ್ನು ಸ್ಥಳೀಯರ ಸಹಕಾರದಿಂದ ಸ್ಥಳಾಂತರಿಸಿರುವುದಾಗಿ ತಿಳಿದು ಬಂದಿದೆ.  ಸ್ಥಳಕ್ಕೆ ಸ್ಥಳೀಯಾಡಳಿತದ ಅಧಿಕಾರಿಗಳು ಆಗಮಿಸಿ ಮಾಹಿತಿ ಪಡೆದಿದ್ದಾರೆ.  ಅಲ್ಲದೆ ಕಂದಾಯ ಅಧಿಕಾರಿಗಳು, ಗ್ರಾಮಕರಣಿಕರು  ಭೇಟಿ ನೀಡಿರುವುದಾಗಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ 

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top