




ಕಡಬ ಟೈಮ್ಸ್ (KADABA TIMES): ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಪ್ರಕೃತಿ ವಿಕೋಪ ಉಂಟಾಗಿದೆ. ಶುಕ್ರವಾರ ರಾತ್ರಿ ಸುರಿದ ಮಳೆಗೆ ಕಡಬ ತಾಲೂಕಿನ ಕೊಯಿಲ ಗ್ರಾ.ಪಂ ಬಳಿ ಗುಡ್ಡ ಕುಸಿತ ಉಂಟಾಗಿದೆ.
ಇದರ ಪರಿಣಾಮ ಗ್ರಾ.ಪಂ ಕುಡಿಯುವ ನೀರಿನ ಟ್ಯಾಂಕ್ ಅಪಾಯದಲ್ಲಿರುವುದಾಗಿ ಮಾಹಿತಿ ಲಭಿಸಿದೆ . ಸ್ಥಳೀಯರು ಮಾರ್ಗ ಮಾಡುವ ಉದ್ದೇಶದಿಂದ ಈ ಹಿಂದೆ ಇಲ್ಲಿ ಮಣ್ಣು ತೆಗೆದಿಯಲಾಗಿತ್ತು. ಇದೇ ಕಾರಣದಿಂದ ಕುಸಿತ ಉಂಟಾಗಿರಬಹುದೆಂದು ಊಹಿಸಲಾಗಿದೆ.
ಈ ಗುಡ್ಡ ಕುಸಿತದಿಂದ ಮನೆಯೊಂದಕ್ಕೆ ಅಪಾಯ ಉಂಟಾಗಿದ್ದು ಜನರು ಆತಂಕಪಡುತ್ತಿದ್ದಾರೆ . ಮನೆಯ ಸಾಮಾಗ್ರಿಗಳನ್ನು ಸ್ಥಳೀಯರ ಸಹಕಾರದಿಂದ ಸ್ಥಳಾಂತರಿಸಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಸ್ಥಳೀಯಾಡಳಿತದ ಅಧಿಕಾರಿಗಳು ಆಗಮಿಸಿ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಕಂದಾಯ ಅಧಿಕಾರಿಗಳು, ಗ್ರಾಮಕರಣಿಕರು ಭೇಟಿ ನೀಡಿರುವುದಾಗಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ