ಕಡಬ: ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ಜಾನುವಾರು ಸಾಗಾಟ ಘಟನೆ ಬೆನ್ನಲ್ಲೇ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ

Kadaba Times News

ಕಡಬ ಟೈಮ್ಸ್ , ಪಟ್ಟಣ ಸುದ್ದಿ : ಮಕರ ಸಂಕ್ರಾತಿ ದಿನದಂದೇ ಪಿಕಾಪ್ ವಾಹನದಲ್ಲಿ ಎಂಟು  ಜಾನುವಾರುಗಳನ್ನು  ಹಿಂಸಾತ್ಮಕ ರೀತಿಯಲ್ಲಿ  ಹಗ್ಗದಿಂದ ಕೈಕಾಲು ಕಟ್ಟಿ  ಸಾಗಾಟ ಮಾಡುತ್ತಿದ್ದ ವೇಳೆ ಕೊಯಿಲ ಬಳಿ ಪೊಲೀಸರು ವಾಹನ ಅಡ್ಡಗಟ್ಟಿದ್ದರು. ಅಲ್ಲದೆ ಅದರೊಳಗೆ ಇದ್ದ ದನಗಳಲ್ಲಿ ಮೂರು ದನಗಳು ಮೃತಪಟ್ಟಿದ್ದವು.ವಿಷಯ ತಿಳಿದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಘಟನಾ ಸ್ಥಳಕ್ಕೆ ತೆರಳಿ ಆಕ್ರೋಶ ಹೊರ ಹಾಕಿದ್ದರು.


ಈ ಬೆನ್ನಲ್ಲೇ ಈಗ ಕಡಬ ಪೊಲೀಸ್ ಠಾಣೆಯ ಮುಂಭಾಗದ ಪ್ರಮುಖ ರಸ್ತೆಯಲ್ಲಿ  ವಿಶ್ವ ಹಿಂದೂ ಪರಿಷತ್ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆದಿದ್ದು ಕೆಲ ಹೊತ್ತು ಸಾಂಕೇತಿಕವಾಗಿ ರಸ್ತೆ ತಡೆದು ಆಕ್ರೋಶ ಹೊರಹಾಕಿ ಕಡಬ ಠಾಣೆಯ ಮೂಲಕ ಮನವಿ ಸಲ್ಲಿಸಲಾಗಿದೆ.

ಪ್ರತಿಭಟನೆಯಲ್ಲಿ ನಿರತರಾಗಿರುವ ಹಿಂದೂ ಸಂಘಟನೆಯ ಪ್ರಮುಖರು


ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಘಟನೆಯ ಮುಂದಾಳು ಪ್ರತೀಪ್ ಸರಿಪಳ್ಳ ಅವರು,   ಅಕ್ರಮ ಕಸಾಯಿಖಾನೆ, ಗೋ ಸಾಗಾಟ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ   ರಸ್ತೆಯಲ್ಲಿ ನಿಲ್ಲಬೇಕಾಗಿ ಬರುತ್ತದೆ, ಯಾವುದೇ ಬೆಲೆ ತೆತ್ತಾದರೂ ನಾವು ಗೋ ರಕ್ಷಣೆ ಮಾಡಿಯೇ ಮಾಡುತ್ತೇವೆ . ಕೊಯಿಲದಲ್ಲಿ  ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಗೋವುಗಳನ್ನು ಸಾಗಿಸಿದರೆ    ಬೆಂಗಳೂರಿನ ಚಾಮರಾಜನಗರದಲ್ಲಿ ಮೂರು ಹಸುಗಳ ಕೆಚ್ಚಲನ್ನು ಕತ್ತರಿಸಿ ವಿಕೃತಿ ಮೆರೆಯಲಾಗಿದೆ.  ಇಂತಹ ಪಾಪಿಗಳನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ, ಎಂದು ಆರೋಪಿಸಿದರು.


 ಮಾಜಿ ತಾ.ಪಂ.ಅಧ್ಯಕ್ಷೆ ಪುಲಸ್ತ್ಯ ರೈ  ಮಾತನಾಡಿ ಕಾಂಗ್ರೆಸ್  ಸರಕಾರ ಈ ಗೋ ಕಟುಕರನ್ನು ರಕ್ಷಣೆ ಮಾಡುತ್ತಾ ಇವರಿಗೆ ಬೆಂಬಲ ನೀಡುತ್ತಿದೆ. ಗೋ ಮಾತೆಯನ್ನು ರಕ್ಷಿಸಲು ನಾವು ಬೀದಿಗಿಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ಹೊರ ಹಾಕಿದರು.


ಪ್ರತಿಭಟನೆಯಲ್ಲಿ  ಬಜರಂಗದಳದ ಅಶ್ವಿತ್ ಕಂಡಿಗ, ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೊಲ್ಪೆ ,ವಿ,ಹಿಂ.ಪ.ನ ಉಪಾಧ್ಯಕ್ಷ ಸುದರ್ಶನ ಶಿರಾಡಿ, ಗೌರವಾಧ್ಯಕ್ಷ ವಾಸುದೇವ ಭಟ್ ಕಡ್ಯ, ಜತೆ ಕಾರ್ಯದರ್ಶಿ ಪ್ರಮೀಳಾ ಲೋಕೇಶ್ ಸೇರಿದಂತೆ ಪಿಜೆಪಿಯ ಪ್ರಮುಖರು,  ಮಾತೃಶಕ್ತಿಯ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


Vishwa Hindu Parishad protests on the road in front of the police station after the incident of illegal cattle trafficking in a violent manner.



#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top