ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಜಯಪುರ ಜಿಲ್ಲಾ ನಿರ್ದೇಶಕರಾಗಿದ್ದ ಸವಣೂರಿನ ಸಂತೋಷ್ ಕುಮಾರ್ ರೈ ಹೃದಯಾಘಾತಕ್ಕೆ ಬಲಿ

Kadaba Times News

ಕಡಬ ಟೈಮ್ಸ್, ಸವಣೂರು:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಜಯಪುರ ಜಿಲ್ಲಾ ನಿರ್ದೇಶಕರಾಗಿದ್ದ ಸವಣೂರು ಗ್ರಾಮದ ಮುಗೇರು ನಿವಾಸಿ ಸಂತೋಷ್ ಕುಮಾರ್ ರೈ( 40 ) ರವರು .2 ರಂದು ಬೆಳಿಗ್ಗೆ ವಿಜಯಪುರದಲ್ಲಿ ಹೃದಯಾಘಾತದಿಂದಾಗಿ ನಿಧನರಾದರು.

ಸಂತೋಷ್ ಕುಮಾರ್ ರೈ


ಸಂತೋಷ್ ಕುಮಾರ್ ರೈ ಸವಣೂರು ರವರು 2001ರಲ್ಲಿ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಸೇವಾನಿರತರಾಗಿ ಉದ್ಯೋಗಕ್ಕೆ ಸೇರಿ, ಆ ಬಳಿಕ ಕಬಕದಲ್ಲಿ ಸೇವಾನಿರತರಾಗಿದ್ದರು.


ಬಳಿಕ ಮೇಲ್ವಿಚಾರಕರಾಗಿ ಭಡ್ತಿಗೊಂಡು, ಆ ಬಳಿಕ ಸುಳ್ಯ ತಾಲೂಕು ಯೋಜನಾಧಿಕಾರಿಯಾಗಿದ್ದರು. ಬಳಿಕ ಬೆಳಗಾವಿಯ ರಾಯಭಾಗದಲ್ಲಿ ಕರ್ತವ್ಯ ನಿರ್ವಹಿಸಿ, ಕಳೆದ 2 ವರುಷಗಳಿಂದ ವಿಜಯಪುರ ಜಿಲ್ಲಾ ನಿರ್ದೇಶಕರಾಗಿದ್ದರು.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top