ನೆಲ್ಯಾಡಿ: ಕಳೆದುಕೊಂಡ 35 ಸಾವಿರ ರೂ ತರಕಾರಿ ವ್ಯಾಪಾರಿಯ ಕೈ ಸೇರಿತು

ನೆಲ್ಯಾಡಿ: ಕಳೆದುಕೊಂಡ 35 ಸಾವಿರ ರೂ ತರಕಾರಿ ವ್ಯಾಪಾರಿಯ ಕೈ ಸೇರಿತು

Kadaba Times News

ಕಡಬ ಟೈಮ್  ನೆಲ್ಯಾ ಡಿ: ರಸ್ತೆಯಲ್ಲಿ ಸಿಕ್ಕಿದ 35 ಸಾವಿರ ರೂಪಾಯಿಯನ್ನು ವಾರೀಸುದಾರರಿಗೆ ಹಿಂತಿರುಗಿಸುವ ಮೂಲಕ ನೆಲ್ಯಾಡಿಯ  ವ್ಯಕ್ತಿಯೊಬ್ಬರು ಪ್ರಾಮಾಣಿಕತೆ ಮರೆದಿದ್ದಾರೆ.


ಹಣವನ್ನು ವಾರಿಸುದಾರರಿಗೆ ನೀಡುತ್ತಿರುವುದು(KADABA TIMES)


ತರಕಾರಿ ವ್ಯಾಪಾರಿ ಉಪ್ಪಿನಂಗಡಿಯ ಮೋನಾಕ ಎಂಬವರು ನೆಲ್ಯಾಡಿಯಲ್ಲಿ ತಮ್ಮ 35 ಸಾವಿರ ರೂ.ಕಳೆದುಕೊಂಡಿದ್ದರು.   ಎಸ್ಡಿಪಿಐ ನೆಲ್ಯಾಡಿ ಗ್ರಾಮ ಸಮಿತಿ ಸದಸ್ಯ ಶರೀಫ್ರವರಿಗೆ ಹಣ ಸಿಕ್ಕಿತ್ತು.  ಹಣ ಸಿಕ್ಕಿರುವ ಬಗ್ಗೆ ವಾಟ್ಸಪ್ ಗ್ರೂಪ್ಗಳಲ್ಲಿ ಸಂದೇಶ ರವಾನಿಸಿ, ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಯನ್ನು ಕೂಡ ನಮೂದಿಸಿದರು


ಕೆಲವೇ ನಿಮಿಷಗಳಲ್ಲಿ ಈ ಸಂದೇಶವು ಸುತ್ತಮುತ್ತಲಿನ ವಾಟ್ಸಾಪ್ ಗ್ರೂಪಿನಲ್ಲಿ ವೈರಲ್ ಆಗಿತ್ತು. ಹಣ ಕಳೆದುಕೊಂಡ ಮೋನಾಕರವರು ಶರೀಫ್‌ರವರನ್ನು ಸಂಪರ್ಕಿಸಿ ಹಣ ತನ್ನದೆಂದು ಖಾತರಿಪಡಿಸಿದರು. ಶರೀಫ್‌ರವರು ಹಣ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮರೆದಿದ್ದಾರೆ.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top