


ಕಡಬ ಟೈಮ್, ಎಡಮಂಗಲ:ಮಂಗಳೂರು- ಬೆಂಗಳೂರು ರೈಲು ಮಾರ್ಗದ ಎಡಮಂಗಲ ಬಳಿ ವ್ಯಕ್ತಿಯೊಬ್ಬರಿಗೆ ರೈಲು ತಾಗಿ ಚರಂಡಿಗೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
![]() |
ಎಡಮಂಗಲ ರೈಲು ನಿಲ್ದಾಣ (kadaba times) |
ಜ.8ರಂದು ಮುಂಜಾನೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಎಡಮಂಗಲ ಗ್ರಾಮದ ದೇರಳ ಮನೆಯ ಪದ್ಮಯ್ಯ ನಾಯ್ಕ್ ( 70 ) ಎಂಬವರು ಗಾಯಗೊಂಡವರು ಎಂಬ ಮಾಹಿತಿ ಲಭ್ಯವಾಗಿದೆ.
ರೈಲುಮಾರ್ಗದ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ರೈಲು ಬಂದುದು ಅರಿವಿಗೆ ಬಂದಿರಲಿಲ್ಲ, ರೈಲು ಒರೆಸಿಕೊಂಕೊಂಡು ಹೋದಾಗ ಆಯ ತಪ್ಪಿ ಕೆಳಗಡೆಗೆ ಚರಂಡಿಗೆ ಬಿದ್ದರೆಂದು ಹೇಳಲಾಗಿದ್ದು ಇದರ ಪರಿಣಾಮ ಭುಜಕ್ಕೆ ಗಂಭೀರ ಗಾಯವಾಗಿರುವುದಾಗಿ ತಿಳಿದು ಬಂದಿದೆ.
ಗಾಯಗೊಂಡ ಇವರನ್ನು ಪುತ್ತೂರು ಸರಕಾರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.