ಕುಕ್ಕೆ ಸುಬ್ರಹ್ಮಣ್ಯ: ರಥಬೀದಿಯುದ್ದಕ್ಕೂ ಬೀಡಾಡಿ ಗೋವು, ಹೋರಿಗಳ ದಂಡು

Kadaba Times News

ಸುಬ್ರಹ್ಮಣ್ಯ: ಇಲ್ಲಿನ  ಹರಿಹರ ಪಳ್ಳತ್ತಡ್ಕ ಗ್ರಾಮದಲ್ಲಿ ಬೀಡಾಡಿ ಹೋರಿ ಎರಗಿ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.  


ಹರಿಹರ ಪಳ್ಳತ್ತಡ್ಕ ಗ್ರಾಮದ ಭೀಮಗುಳಿ ಪುಟ್ಟಣ್ಣ ಗೌಡ ಗಾಯಗೊಂಡವರು. ಮನೆಯ ಸಮೀಪ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಂದರ್ಭ ರಸ್ತೆ ಬದಿಯಿದ್ದ ಹೋರಿ ಏಕಾಏಕಿ ಅವರ ಮೇಲೆ ಎರಗಿದೆ.  ಘಟನೆಯಲ್ಲಿ ತಲೆ, ಸೊಂಟ, ಪಕ್ಕೆಲುಬಿಗೆ ಗಾಯವಾಗಿದೆ.  ಗಾಯಗೊಂಡ ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ  ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೀಡಾಡಿ ಜಾನುವಾರುಗಳ ಹಾವಳಿ ಹರಿಹರ ಪಳ್ಳತ್ತಡ್ಕದಲ್ಲಿ ಹೆಚ್ಚಾಗಿದ್ದು ನಿಯಂತ್ರಣಕ್ಕೆ ಆಗ್ರಹ ಕೇಳಿಬಂದಿದೆ.

 

ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಲ್ಲಿ ಬೀಡಾಡಿ ಗೋವು, ಹೋರಿಗಳು: ಕುಕ್ಕೆ ಸುಬ್ರಹ್ಮಣ್ಯ ರಥ ಬೀದಿಯಲ್ಲಿ ಹಾಗೂ  ಪೇಟೆಯಲ್ಲಿ ಬೀಡಾಡಿ ಗೋವು, ಹೋರಿಗಳ ಸಂಖ್ಯೆ ಹೆಚ್ಚಾಗಿದೆ.  ಆಹಾರಗಳನ್ನು ಹುಡುಕುತ್ತ ಬಲಶಾಲಿಯಾದ ಹೋರಿಗಳು ,ಹಸು,ಕರುಗಳು ಗುಂಪಾಗಿ ಸಾರ್ವಜನಿಕ ಸ್ಥಳಗಳಲ್ಲಿಯೇ  ಓಡಾಡುತ್ತಿವೆ.  ರಥಬೀದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ ಸಮಯದಲ್ಲಿ  ಬಲಶಾಲಿಯಾದ ಈ ಹೋರಿಗಳ ಗುದ್ದಾಟ ನಡೆದರೆ ,ಗುಂಪಾಗಿ ದಾಳಿ ಮಾಡಿದರೆ ಮಕ್ಕಳಿಂದ ಹಿಡಿದು ವೃದ್ದರವರೆಗೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.



ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ. ಚಂಪಾ ಷಷ್ಠಿ ಜಾತ್ರೆ ಮುನ್ನ ಬೀದ್ಡಾಡಿ ಗೋವುಳ ಸ್ಥಳಾಂತರದ ಬಗ್ಗೆ  ಚರ್ಚೆ ನಡೆದಿತ್ತು.ಆದರೆ ಇಂತಹ ಗಂಭೀರ ವಿಚಾರ ಚರ್ಚೆಗೆ ಮಾತ್ರ ಸೀಮಿತವಾಗಿದೆ ಎಂಬ ಅಭಿಪ್ರಾಯಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು  ಬೀದಿನಾಯಿ ಮತ್ತು ಬೀಡಾಡಿ ದನ ಹೋರಿಗಳನ್ನು ಸ್ಥಳೀಯಾಡಳಿತ ಕೂಡಲೇ ಸ್ಥಳಾಂತರ ಮಾಡಿ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top