




ಸ್ಥಳೀಯ ಸಿಸಿ ಟಿವಿಯಲ್ಲಿ ದಾಖಲಾದ ದೃಶ್ಯ (KADABA TIMES)
ಖಾಸಗಿ ಶಾಲಾ ಬಸ್ಸೊಂದರ ಗಾಳಿ ತುಂಬಿಸುವಾಗ ಟಯರ್ ಸ್ಫೋಟಗೊಂಡು ಯುವಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಉಡುಪಿಯ ಕೋಟೇಶ್ವರದಿಂದ ವರದಿಯಾಗಿದೆ.
ಕೆಪಿಎಸ್ಪಿ ಪಿಯು ಕಾಲೇಜು ಬಳಿ ಈ ಘಟನೆ ನಡೆದಿದ್ದು ಅಬ್ದುಲ್ ರಜೀದ್ ಎಂಬವರು
ಗಂಭೀರವಾಗಿ ಗಾಯಗೊಂಡಿರುವ ಯುವಕ.
ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಟಯರ್ ಪಂಚರ್ ಶಾಪ್ನಲ್ಲಿ ಶಾಲಾ ಬಸ್ನ ಟಯರ್ಗೆ ಗಾಳಿ ತುಂಬುತ್ತಿರುವ ವೇಳೆ ಸ್ಫೋಟಗೊಂಡಿದೆ. ಈ ವೇಳೆ ರಜೀದ್ ಗಾಳಿಯಲ್ಲಿ ಮೇಲೆ ಹಾರಿ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ
ಮಾಹಿತಿ ಲಭ್ಯವಾಗಿದೆ.