




ಕಡಬ ಟೈಮ್, ಪಟ್ಟಣ ಸುದ್ದಿ: ಸಮುದಾಯ ಭವನ ಸಮಾಜದ ಸ್ವಾಭಿಮಾನದ ಸಂಕೇತವಾಗಿದೆ. ಈ ನಿಟ್ಟಿನಲ್ಲಿ ಸಮಾಜ ಬಾಂಧವರ ಶ್ರಮ, ಶ್ರದ್ಧೆ, ಭಕ್ತಿ ಮೆಚ್ಚವಂತದ್ದು ಎಂದು ಆದಿಚುಂಚನಗಿರಿ ಮಂಗಳೂರು ಕಾವೂರು ಶಾಖಾ ಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ ನುಡಿದರು.
![]() |
ಕಾವೂರು ಶಾಖಾ ಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ |
ಕಡಬದ ಹೊಸಮಠದ ಬಳಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಅನುಗ್ರಹ ಸಂದೇಶ ನೀಡಿದರು. ಸಮಾಜ ಬಾಂಧವರ ಮನೆ ಮನೆ ಭೇಟಿ ಅಭಿಯಾನ ಸೇರಿದಂತೆ ಯೋಜನೆಗಳು 10 ಸಮಾಜಕ್ಕೆ ಮಾದರಿಯಾಗಿದೆ.
ಸಮುದಾಯ ಭವನ ನಿರ್ಮಾಣ ನಿಟ್ಟಿನಲ್ಲಿ ಆರ್ಥಿಕ ನೆರವಿನ ಜೊತೆಗೆ ಮಾನವ ಶ್ರಮದಾನದ ಸೇವೆಯೂ ಶ್ರೇಷ್ಠವಾದದ್ದು. ಪ್ರತಿಯೊಬ್ಬರ ಸೇವೆಯ ಮೂಲಕ ಸಮುದಾಯ ಭವನ ಬೃಹತ್ ಆಗಿ ಬೆಳೆಯಲಿ ಎಂದು ನುಡಿದರು.