ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕೊಡಮಾಡುವ ಹವ್ಯಕ ಕೃಷಿ ರತ್ನ ಪ್ರಶಸ್ತಿಗೆ ಸೌಮ್ಯ ಪೆರ್ನಾಜೆ ಆಯ್ಕೆ

Kadaba Times News

 

ಜೀನುಗಡ್ಡದಾರಿ ಶ್ರೀ ಮತಿ ಸೌಮ್ಯ ಪೆರ್ನಾಜೆ(KADABATIMES)

ಕಡಬ ಟೈಮ್ಸ್, ಪುತ್ತೂರು:  ಕೃಷಿ ಕ್ಷೇತ್ರದಲ್ಲಿನ  ಸಾಧನೆ ಗುರುತಿಸಿ ಶ್ರೀ ಅಖಿಲ ಹವ್ಯಕ ಮಹಾಸಭೆಯು ಹವ್ಯಕ ಕೃಷಿ ರತ್ನ ಪ್ರಶಸ್ತಿಗೆ ಸೌಮ್ಯ ಪೆರ್ನಾಜೆ  ಅವರನ್ನು ಆಯ್ಕೆ ಮಾಡಿದೆ. 


ಬೆಂಗಳೂರು ಅರಮನೆ ಮೈದಾನದಲ್ಲಿ ಡಿ.27 ರಂದು  ನಡೆಯುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಈ   ಪ್ರಶಸ್ತಿಯನ್ನು  ಗಣ್ಯರ ಸಮ್ಮುಖದಲ್ಲಿ ಹವ್ಯಕ  ಕೃಷಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.


ಮಹಿಳಾ ಜೇನುಗಡ್ಡದಾರಿ,  ಜೇನು  ಕೃಷಿ ವಿಶಿಷ್ಟ ಬರಹಗಳು , ಸುಂದರ ಕೈಬರಹ, ವೈವಿಧ್ಯಮಯ ತಿಂಡಿಗಳು ಸ್ವಾದಿಷ್ಟ ರುಚಿಕರ ಆಹಾರದ  ಬರಹ ಇವರ  ವಿಶೇಷತೆಯಾಗಿದೆ.  ಇವರು ಕಲಾ ನಿರ್ದೇಶಕ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕುಮಾರ್ ಪೆರ್ನಾಜೆಯವರ ಪತ್ನಿ. ಪಟಿಕ್ಕಲ್ಲು ರಾಮಚಂದ್ರ ಭಟ್ ಮತ್ತು ದೇವಕಿ ದಂಪತಿಯವರ ಪುತ್ರಿಯಾಗಿದ್ದಾರೆ.



#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top