




![]() |
ನೂತನ ಪದಾಧಿಕಾರಿಗಳ ಚುನಾವಣೆ ಮತ್ತು ವಾರ್ಷಿಕ ಮಹಾಸಭೆ( KADABA TIMES) |
ಕಡಬ: ಮಲಂಕರ ಕ್ಯಾಥೋಲಿಕ್ ಅಸೋಸಿಯೇಷನ್ ಪುತ್ತೂರು ಧರ್ಮಪ್ರಾಂತ್ಯದ ದಕ್ಷಿಣ ಕನ್ನಡ ವಲಯ ಎಂ.ಸಿ.ಎ ಸಂಘಟನೆಯ ನೂತನ ಪದಾಧಿಕಾರಿಗಳ ಚುನಾವಣೆ ಮತ್ತು ವಾರ್ಷಿಕ ಮಹಾಸಭೆಯು ನೂಜಿಬಾಳ್ತಿಲ ಸಂತ ಮರಿಯಮ್ಮ ಪ್ರೋ ಕಥೇಟ್ರಲ್ ಚರ್ಚಿನಲ್ಲಿ ಇತ್ತೀಚೆಗೆ ನಡೆಯಿತು.
ಸಂಘಟನೆಯ ಮಾಜಿ ಅಧ್ಯಕ್ಷ ಸುಜಿತ್ ಪಿ.ಕೆ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಜಿಲ್ಲಾ ವಲಯದ ಸುಮಾರು 16 ಚರ್ಚ್ಗಳಿಂದ ಎಂ.ಸಿ.ಎ ಘಟಕಗಳ ಪದಾಧಿಕಾರಿಗಳು ಆಗಮಿಸಿ ಚುನಾವಣಾ ಪ್ರಕ್ರಿಯೆ ಮತ್ತು ಮಹಾಸಭೆಯಲ್ಲಿ ಭಾಗವಹಿಸಿದರು. ವಿವಿಧ ಘಟಕಗಳ ದ್ವೈವಾರ್ಷಿಕ ವರದಿ ಮತ್ತು ವಲಯದ ವರದಿ ಹಾಗೂ ಲೆಕ್ಕಪತ್ರ ಮಂಡಿಸಲಾಯಿತು.
ಈಗಾಗಲೇ ಹಲವು ಮನೆಗಳ ನಿರ್ಮಾಣ ಮತ್ತು ಸಾಮಾಜಿಕ ಸೇವೆಗಳ ಮೂಲಕ ತೊಡಗಿಕೊಂಡಿರುವ ಪುತ್ತೂರು ಧರ್ಮಪ್ರಾಂತ್ಯದ ಎಂ.ಸಿ.ಎ ಅಧ್ಯಕ್ಷ ಬೈಜು ಎಸ್.ಆರ್ ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು.
![]() |
ಎಂ.ಸಿ.ಎ ಅಧ್ಯಕ್ಷ ಬೈಜು ಎಸ್.ಆರ್ ಅವರನ್ನು ಸನ್ಮಾನಿಸುತ್ತಿರುವುದು |
ನೂತನ ಪದಾಧಿಕಾರಿಗಳ ವಿವರ: ಎಂ.ಸಿ.ಎ ದಕ್ಷಿಣ ಕನ್ನಡ
ವಲಯದ ನೂತನ ಆಡಳಿತ ಸಮಿತಿಗೆ ಅಧ್ಯಕ್ಷರಾಗಿ ಇಚ್ಲಂಪಾಡಿ ಚರ್ಚಿನ ಜೋಜೋ ಪುಳಿಕಲ್, ಪ್ರಧಾನ ಕಾರ್ಯದರ್ಶಿಯಾಗಿ ವಿಮಲಗಿರಿ ಚರ್ಚಿನ ಉಷಾ ಎಂ.ಎಲ್, ಕೋಶಾಧಿಕಾರಿಯಾಗಿ
ಕಲ್ಲುಗುಡ್ಡೆ ಚರ್ಚಿನ ವರ್ಗೀಸ್ ಪಿ.ಯು,
ಉಪಾಧ್ಯಕ್ಷರಾಗಿ ಜಾರ್ಜ್
ಕೆ. ಥಾಮಸ್ ನೆಲ್ಯಾಡಿ ಮತ್ತು ಸ್ಮಿತಾ ಕಾನಂ ಇಚಿಲಂಪಾಡಿ ಯವರು, ಕಾರ್ಯದರ್ಶಿಗಳಾಗಿ ಪ್ರಮೋದ್ ಅಡಿಯಟ್ಟು ಶಿಬಾಜೆ ಮತ್ತು ಲಿಸ್ಸಿ ಮಥಾಯ್ ಕೆರ್ಮಾಯಿ ಹಾಗೂ ಕಾರ್ಯನಿರ್ವಾಹಕ ಸದಸ್ಯರುಗಳಾಗಿ ಜೋಸ್ ಕಾಂಞರವಿಳ ನೂಜಿಬಾಳ್ತಿಲ ಮತ್ತು ಬಿನ್ಸಿ ರಾಜು ಕೋಡಿಂಬಾಳ ಮತ್ತು ಎಕ್ಸ್-
ಆಫೀಷಿಯೋ ಆಗಿ ಮಾಜಿ ಅಧ್ಯಕ್ಷ ಸುಜಿತ್ ಪಿ.ಕೆ ಅವರು
ಆಯ್ಕೆಯಾದರು. ಮಾತ್ರವಲ್ಲದೆ ಏಳು ಜನರನ್ನು ಪುತ್ತೂರು ಧರ್ಮಪ್ರಾಂತ್ಯದ ಎಂ.ಸಿ.ಎ
ಪದಾಧಿಕಾರಿಗಳ ಆಯ್ಕೆ ಸಮಿತಿಗೆ ನಾಮಕರಣ ಸದಸ್ಯರಾಗಿ ಸೂಚಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೋಟೋ ವಿಕಾರ್ ರೆ.ಫಾ. ಡಾನಿಯಲ್ ಕಡಕಂಪಳ್ಳಿ, ಎಂ.ಸಿ.ಎ ಪ್ರಾದೇಶಿಕ ಆಧ್ಯಾತ್ಮಿಕ ಸಲಹೆಗಾರ ರೆ.ಫಾ.ವಿಜೋಯ್ ವರ್ಗೀಸ್ ತೆಕ್ಕೆಪೂಕಳಂ ಒ.ಐ.ಸಿ. ,ಫಾ.ಆಂಟನಿ ಪಡಿಪುರಕ್ಕಲ್,ಫಾ.ತೋಮಸ್(ಜೂಬಿ),ಫಾ.ಜೋನ್ ಪುತ್ತನ್ಕಂಡತ್ತಿಲ್,ಫಾ.ಶೈಜು, ಪುತ್ತೂರು ಧರ್ಮಪ್ರಾಂತ್ಯದ ಎಂಸಿಎ ಅಧ್ಯಕ್ಷ ಬೈಜು ಎಸ್.ಆರ್,ಕಾರ್ಯದರ್ಶಿ ಪ್ರಕಾಶ್ ನೆಲ್ಯಾಡಿ, ಕೋಶಾಧಿಕಾರಿ ಆಂಡ್ರೋಸ್ ಪುತ್ತೂರು,ಎಂಸಿಎ ದಕ್ಷಿಣ ಕನ್ನಡ ವಲಯದ ಪದಾಧಿಕಾರಿಗಳಾದ ವರ್ಗೀಸ್,ತಂಗಚ್ಚನ್, ಪ್ರಕಾಶ್ ಕೋಡಿಂಬಾಳ, ನೀನಾ ಸಂತೋಷ್,ಎಲ್ಸಿ ಪ್ರಕಾಶ್ ನೆಲ್ಯಾಡಿ ಸೇರಿದಂತೆ ಎಲ್ಲಾ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.