


ಕಡಬ ಟೈಮ್, ಪಟ್ಟಣ ಸುದ್ದಿ: ದ.ಕ ಮತ್ತು ಕಾಸರಗೋಡು ಜಿಲ್ಲಾ ಮೊಗೇರ ಸಂಘ ಸ್ಥಾಪನೆಯಾಗಿ 50 ವರ್ಷಗಳು ಕಳೆದ ಸವಿ ನೆನಪಿಗಾಗಿ ಮೊಗೇರ ಸುವರ್ಣ ಸಂಭ್ರಮ ಪುಳ್ಳಯ-2024 ಮತ್ತು ನೂತನ ತಾಲೂಕು ಮೊಗೇರ ಸಂಘದ ಪದಗ್ರಹಣ ಕಾರ್ಯಕ್ರಮವು ಡಿ.25 ರಂದು ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಗೌರವ ಸಲಹೆಗಾರರಾದ ವಿಜಯ ವಿಕ್ರಮ್
ಪ್ರಸ್ತಾವಿಕವಾಗಿ ಮಾತನಾಡಿ 50 ವರ್ಷಗಳ ಹಿಂದೆ ಆರಂಭದಲ್ಲಿ
ಸಂಘಟನೆ ರಚಿಸಲು ಕಾರಣ ಕರ್ತರಾದವರನ್ನು ಸ್ಮರಿಸುವುದು
ಇಂದಿನ ಅಗತ್ಯ. ಬೈಲಾದಲ್ಲಿರುವಂತೆ ಹಿರಿಯರು ಪ್ರಸ್ತಾಪಿಸಿದ ದ್ಯೇಯೋದ್ದೇಶಗಳನ್ನು ಪಾಲಿಸುವ ಮೂಲಕ ಸಂಘಟನೆ ಬಲಿಷ್ಟಗೊಳಿಸಲು ಬದ್ದರಾಗೋಣ ಎಂದರು.
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಎಸ್ ಅಂಗಾರ ಅವರು, ಜನಾಂಗದ ಇತಿಹಾಸ ತಿಳಿದುಕೊಂಡಾಗ
ಪ್ರಾಮಾಣಿಕ ಪರಿಶ್ರಮದ ಮೂಲಕ ಇತಿಹಾಸವನ್ನು ಮರು ನಿರ್ಮಿಸಲು
ಸಾಧ್ಯವಿದೆ. ಹಿರಿಯರ ಅಪೇಕ್ಷೆಯಂತೆ ಅಧಿಕಾರಕ್ಕೆ
ಮಹತ್ವ ನೀಡದೆ ನಡೆ-ನುಡಿಯಲ್ಲಿ ಬದ್ದತೆ ತೋರಬೇಕು,
ತಾಳ್ಮೆ ವಹಿಸಿ ಕೆಲಸ ಕಾರ್ಯ ಮಾಡುವ ಮೂಲಕ ಸಮುದಾಯದ
ಅಭ್ಯುದಯಕ್ಕೆ ಸಂಘಟನೆ ಕಾರಣವಾಗಬೇಕೆಂದರು.
![]() |
ಮಾಜಿ ಸಚಿವ ಎಸ್.ಅಂಗಾರ ಅವರು ಪುಳ್ಳಯ-2024 ಉದ್ಘಾಟಿಸುತ್ತಿರುವುದು |
ಕರ್ನಾಟಕ ರಾಜ್ಯ ಮೊಗೇರ ಸಂಘದ ಅಧ್ಯಕ್ಷ ನಂದರಾಜ್
ಸಂಕೇಶ ಅವರು ನೂತನ ತಾಲೂಕು ಮೊಗೇರ ಸಂಘದ ಪದಗ್ರಹಣ
ನೆರವೇರಿಸಿ ಮಾತನಾಡಿ , ಸಂಘಟನೆಯಲ್ಲಿ ಸ್ವಂ ಪ್ರತಿಷ್ಟೆ
ಬೇಡ , ನಮ್ಮ ಸಮುದಾಯದ ಸಂಸ್ಕೃತಿ ಅನನ್ಯವಾದುದು, ಅದನ್ನು ಸಂಘಟನೆ ಮೂಲಕ ಎಲ್ಲೆಡೆ ಪಸರಿಸಬೇಕು. ಸಂಘಟನೆ
ಎಂದಿಗೂ ವಿಘಟನೆ ಆಗಬಾರದು, ಹೀಗಾಗಿ ರಾಜ್ಯ ಸಂಘವು
ಶಿಸ್ತು ಮತ್ತು ಪಾರದರ್ಶಕಕ್ಕೆ ಮೊದಲ ಒತ್ತು ನೀಡಿ
ಬಲಗೊಳಿಸಲು ರೂಪುರೇಷೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಭಿಯಾನದ ಮೂಲಕ 50 ಸಾವಿರ ಸದಸ್ಯತ್ವ ಗುರಿ ಹೊಂದಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕಡಬ ಉಪ ತಹಶೀಲ್ದಾರ್ ಗೋಪಾಲ ಅವರು ಮಾತನಾಡಿ, ನಮ್ಮ ಮನೆಯಿಂದಲೇ ಜಾಗೃತಿಯ ದೀಪ ಬೆಳಗಿದರೆ ಸಮುದಾಯ
ಮತ್ತು ಸಮಾಜದಲ್ಲಿ ನಿಜವಾದ ಬೆಳಕು ಮೂಡುತ್ತದೆ. ಸಮಾಜ
ಕಟ್ಟಲು ಕುಟುಂಬ ವ್ಯವಸ್ಥೆಯಲ್ಲಿ ಪ್ರೀತಿ ವಿಶ್ವಾಸ ಬಲಗೊಳ್ಳಬೇಕು ಆ ನಿಟ್ಟಿನಲ್ಲಿ ನಾವು ಯೋಚಿಸಿಬೇಕೆಂದರು.
![]() |
ರಾಜ್ಯ ಮೊಗೇರ ಸಂಘದ ಅಧ್ಯಕ್ಷ ನಂದರಾಜ್ ಸಂಕೇಶ ನೂತನ ತಾಲೂಕು ಮೊಗೇರ ಸಂಘದ ಪದಗ್ರಹಣ ನೆರವೇರಿಸುತ್ತಿರುವುದು |
ಅಧ್ಯಕ್ಷತೆ ವಹಿಸಿದ್ದ ನೂತನ ತಾಲೂಕು ಮೊಗೇರ ಸಂಘದ ಅಧ್ಯಕ್ಷ ಶಶಿಧರ ಬೊಟ್ಟಡ್ಕ ವರು ಸಮುದಾಯಿಕ ಕಾರ್ಯಕ್ರಮಗಳ ಮೂಲಕ ಸಂಘಟನೆಯನ್ನು ಬಲಗೊಳಿಸಲು ಎಲ್ಲರೂ ಸಹಕರಿಸಬೇಕೆಂದರು. ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್ ಅಧ್ಯಕ್ಷ ಡಾ.ರಘು ಬೆಳ್ಳಿಪ್ಪಾಡಿ,ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ರವಿ ಮಡಿಕೇರಿ ಸಮಯೋಚಿತವಾಗಿ ಮಾತನಾಡಿದರು. ಪ್ರಗತಿಪರ ಕೃಷಿಕ ಅರುಣ್ ಕಂಗುಳೆ, ಧರ್ಮದರ್ಶಿ ಪಾಬು ಪಚಲಂಪಾರೆ, ಕಾಸರಗೋಡು ಜಿಲ್ಲಾ ಮೊಗೇರ ಸಂಘದ ಅಧ್ಯಕ್ಷ ಹರಿಶ್ಚಂದ್ರ ಪುತ್ತಿಗೆ, ಕೆ. ಮಾಣಿ ಕಮ್ಮರಗೋಡು, ಹಾಸನ ಜಿಲ್ಲಾಧ್ಯಕ್ಷ ಕೃಷ್ಣ ಕಾಟಳ್ಳಿ, ಸುಳ್ಯ ತಾಲೂಕು ಸಂಘದ ಅಧ್ಯಕ್ಷ ಕರುಣಾಕರ ಪಳ್ಳತ್ತಡ್ಕ, ಪುತ್ತೂರು ತಾಲೂಕು ಸಂಘದ ಸುಂದರ ಕೇಪುಳು, ಲೇಖಕ ಸತೀಶ್ ಸಾಲಿಯಾನ್ ನೆಲ್ಲಿಕುಂಜೆ , ಕುಟ್ರುಪ್ಪಾಡಿ ಗ್ರಾ.ಪಂ ಅಧ್ಯಕ್ಷೆ ಸುಮನಾ ಉಪಸ್ಥಿತರಿದ್ದರು.
![]() |
ಸಾಧಕರಿಗೆ ಸನ್ಮಾನ-ಪುಳ್ಳಯ-2024 |
ಸನ್ಮಾನ: ಬಹುಮುಖ ಪ್ರತಿಭೆ
ವಸಂತಿ ನಿಡ್ಲೆ, ಕಲಾವಿದ ಮಂಜುನಾಥ ಬಂಗ್ಲಗುಡ್ಡೆ, ಶಿಕ್ಷಕಿ ಸುಜಾತ ಏಕನಾಥ
ಅವರನ್ನು ಸನ್ಮಾನಿಸಲಾಯಿತು . ಸರೋಜಿನಿ ಮತ್ತು ಬಳಗದವರು ಪ್ರಾರ್ಥನೆ ಮಾಡಿದರು. ರವಿಚಂದ್ರ ಪಡುಬೆಟ್ಟು
ಸ್ವಾಗತಿಸಿ ಬಾಲಕೃಷ್ಣ ಕೇಪುಳು ಧನ್ಯವಾದವಿತ್ತರು.
ಸವಿತ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.ನೂತನ ಮೊಗೇರ
ಸಂಘದ ಪದಾಧಿಕಾರಿಗಳು ಸಹಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಸಮುದಾಯ ಬಾಂಧವರಿಂದ ಜನಪದ ನೃತ್ಯ, ಸಂಗೀತ ರಸಮಂಜರಿ ನೋಡುಗರ ಗಮನ ಸೆಳೆಯಿತು. ಕಾಸರಗೋಡಿನ ಬೆಳ್ಳೂರು ಮೊಗೇರ ದುಡಿ ನಲಿಕೆ ತಂಡದ ಸದಸ್ಯರು ಪ್ರಸ್ತುತಪಡಿಸಿದ ದುಡಿ ಕುಣಿತ ಕಾರ್ಯಕ್ರಮ ಜನಮನಸೆಳೆಯಿತು.
ಬ್ರಹ್ಮ ಮೊಗೇರೆರ್ ಯಕ್ಷಗಾನಕ್ಕೆ ಮನಸೋತ ಪ್ರೇಕ್ಷಕರು: ಬಪ್ಪಾನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ದಿ.ಗೋವಿಂದ ಮಾಸ್ತರ್ ಗಾಂಧಿಪೇಟೆ ಸಂಗ್ರಹಿತ ಶ್ರೀ ತಾರಾನಾಥ ಬಲ್ಯಾಯ ವರ್ಕಾಡಿ ಪದ್ಯ ರಚನೆಯ ಬ್ರಹ್ಮ ಮೊಗೇರೆರ್ ತುಳು ಯಕ್ಷಗಾನ ಬಯಲಾಟ ನಡೆಯಿತು. ತೆಂಕು-ಬಡಗಿನ ಡಾ. ಸತ್ಯನಾರಾಯಣ ಪುಣಿಚಿತ್ತಾಯ,ಗಾನ ಮಂದಾರ ಗಿರೀಶ್ ರೈ ಕಕ್ಯೆಪದವು ಭಾಗವತಿಕೆಯಲ್ಲಿ ಪ್ರಸಿದ್ದ ಕಲಾವಿದರು ಪಾತ್ರಗಳಿಗೆ ಜೀವ ತುಂಬಿದರು.