ಕಡಬ: ಬೈಕ್ - ಸ್ಕೂಟರ್ ನಡುವೆ ಮುಖಾಮುಖಿ ಡಿಕ್ಕಿ : ಗಂಭೀರ ಗಾಯಗೊಂಡು ನಾಲ್ವರು ಆಸ್ಪತ್ರೆಗೆ ದಾಖಲು

ಕಡಬ: ಬೈಕ್ - ಸ್ಕೂಟರ್ ನಡುವೆ ಮುಖಾಮುಖಿ ಡಿಕ್ಕಿ : ಗಂಭೀರ ಗಾಯಗೊಂಡು ನಾಲ್ವರು ಆಸ್ಪತ್ರೆಗೆ ದಾಖಲು

Kadaba Times News

 ಕಡಬ ಟೈಮ್, ಇಚಿಲಂಪಾಡಿ:  ಬೈಕ್ - ಸ್ಕೂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ನಿಯಂತ್ರಣ ಕಳೆದುಕೊಂಡ ಬೈಕ್ ಎದುರಿನಿಂದ ಬರುತ್ತಿದ್ದ ತೂಪಾನ್ ವಾಹನಕ್ಕೆ ಡಿಕ್ಕಿಯಾದ ಘಟನೆ ಡಿ.26ರಂದು ಸಂಜೆ ಸುಬ್ರಹ್ಮಣ್ಯ-ಧರ್ಮಸ್ಥಳ ರಾಜ್ಯ ಹೆದ್ದಾರಿಯ ಇಚ್ಲಂಪಾಡಿಯಲ್ಲಿ ನಡೆದಿದೆ.


ಅಪಘಾತಗೊಂಡ ದ್ವಿಚಕ್ರ ವಾಹನಗಳು ಮತ್ತು ತೂಪಾನ್( KADABA TIMES)


 ಬದನೆ ಕ್ರಾಸ್‌ ಎಂಬಲ್ಲಿ ಈ ಘಟನೆ ನಡೆದಿದ್ದು . ಸವಾರರು ,  ಸಹ ಸವಾರರು ಗಾಯಗೊಂಡು ಮಂಗಳೂರು ಮತ್ತು ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.


ನೆಲ್ಯಾಡಿ ಗ್ರಾಮದ ಪುಚ್ಚೇರಿ ನಿವಾಸಿ ಯಾದವ ಕುಂಬಾರ ಮತ್ತು  ಅವರ ಪುತ್ರ ದಿಗಂತ್ ಮರ್ದಾಳದಿಂದ ನೆಲ್ಯಾಡಿ ಕಡೆಗೆ ಬರುತ್ತಿದ್ದ ಸ್ಕೂಟರ್ ಹಾಗೂ ನೂಜಿಬಾಳ್ತಿಲ ನಿವಾಸಿಗಳಾದ , ರಬ್ಬರ್ ಟ್ಯಾಪಿಂಗ್ ಕಾರ್ಮಿಕರಾದ ಸುರೇಶ್ ,  ಜೋಬಿ ಎಂಬವರು ಪೆರಿಯಶಾಂತಿಯಿಂದ ನೂಜಿಬಾಳ್ತಿಲ ಕಡೆಗೆ ಹೋಗುತ್ತಿದ್ದ ಬೈಕ್ ನಡುವೆ  ಮುಖಾಮುಖಿ ಡಿಕ್ಕಿ ಸಂಭವಿಸಿದೆ.

 

 ನಿಯಂತ್ರಣ ಕಳೆದುಕೊಂಡ ಬೈಕ್  ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಹೊಸಪೇಟೆ ನಿವಾಸಿಗಳಿದ್ದ ತೂಪಾನ್ ವಾಹನಕ್ಕೆ ಡಿಕ್ಕಿಯಾಗಿದೆ.  ಘಟನೆಯಲ್ಲಿ ಎರಡೂ  ದ್ವಿಚಕ್ರ ವಾಹನದಲ್ಲಿದ್ದ  ಸವಾರರರು  ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ. ನೆಲ್ಯಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top